Breaking News: ನೆಲಮಂಗಲದಲ್ಲಿ ಶುರುವಾಯ್ತು ಜಾನುವಾರಗಳ ಕಳ್ಳರ ಹಾವಳಿ

0
Spread the love

ನೆಲಮಂಗಲ;- ತಾಲ್ಲೂಕು ಹೊಟ್ಟಪ್ಪನ ಪಾಳ್ಯದಲ್ಲಿ ತಡರಾತ್ರಿ ಮೂರು ಜನ ಕಳ್ಳರು ಟಿಟಿ ವಾಹನದಲ್ಲಿ ಬಂದು ಗೋವುಗಳನ್ನು ಕದ್ದು ಎಸ್ಕೇಪ್ ಆಗುತ್ತಿದ್ದಾಗ ಗ್ರಾಮಸ್ಥರು ವಾಹನವನ್ನು ಅಡ್ಡಗಟ್ಟುತ್ತಿದ್ದಂತೆ ಎರಡು ಗೋವುಗಳನ್ನು ಬಿಟ್ಟು ಕಳ್ಳರು ಪರಾರಿಯಾಗಿದ್ದಾರೆ.

Advertisement

ಇನ್ನು ಜಾನುವಾರನ್ನು ಕದಿಯುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೇರೆಯಾಗಿದ್ದು, ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಹಿಂದೆ ಕೂಡ ಸಾಕಷ್ಟು ಗೋವುಗಳು ಕಳ್ಳತನವಾಗಿದ್ದು, ಟಿಟಿವಾಹನದಲ್ಲಿ ಮಾರಕಾಸ್ತ್ರ ಕೂಡ ಪತ್ತೆಯಾಗಿದೆ. ಈ ಜಾನುವಾರಗಳ ಕಳ್ಳತನ ಮತ್ತೆ ಶುರುವಾಗಿರುವುದು ಗ್ರಾಮಸ್ಥರ ನಿದ್ದೆಗೆಡಿಸಿದೆ.


Spread the love

LEAVE A REPLY

Please enter your comment!
Please enter your name here