ವಿಜಯಸಾಕ್ಷಿ ಸುದ್ದಿ, ಗದಗ: ಮನುಷ್ಯನ ಜೀವನವನ್ನೆ ಬದಲಾಯಿಸುವ ಶಕ್ತಿ ಸತ್ಸಂಗಕ್ಕಿದೆ ಎಂದು ಆಧ್ಯಾತ್ಮ ವಿದ್ಯಾಶ್ರಮದ ಶರಣೆ ನೀಲಮ್ಮತಾಯಿಯವರು ನುಡಿದರು.
ನಗರದ ರಾಚೋಟಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಶ್ರಾವಣ ಚರಿತಾಮ್ರತ ಪ್ರವಚನದಲ್ಲಿ ಅವರು ಮಾತನಾಡುತ್ತಾ, ಲೌಕಿಕ ಚೌಕಟ್ಟಿನಲ್ಲಿ ಬಾಳುವವರು ಸತ್ಸಂಗದಲ್ಲಿ ಭಾಗವಹಿಸಬೇಕು. ಸತ್ಸಂಗದಲ್ಲಿ ಭಾಗವಹಿಸುವುದರಿಂದ ಮೋಹ ಇರುವುದಿಲ್ಲ. ಸತ್ಸಂಗದಿಂದ ಮನಸ್ಸು ಬದಲಾಗುವದು. ಮನುಷ್ಯ, ಮನುಷ್ಯನಾಗಿ ಸಾಯಬಾರದು. ಮನಷ್ಯ ಶರಣರಂತೆ ಸಾಯಬೇಕು. ಶ್ರಾವಣ ಮಾಸದಲ್ಲಿ ಒಳ್ಳೆಯದನ್ನು ಕೇಳಬೇಕು. ಒಳ್ಳೆಯದನ್ನು ಕೇಳಿದಂತೆ ನಡೆದುಕೊಳ್ಳಬೇಕು. ಸತ್ಸಂಗ ಮದ, ಮೋಹ, ಮತ್ಸರ ಬಿಡಿಸುತ್ತದೆ. ಸತ್ಸಂಗದ ಜ್ಞಾನ ಇದ್ದರೆ ಮನುಷ್ಯ ಸಮಾಜದಲ್ಲಿ ಒಳ್ಳೆಯವನಾಗಿ ಬದುಕುವನು. ಭಕ್ತಿ ಭಾವನೆ ಬಂದರೆ ಶರಣನಾಗುವ ಎಂದು ನುಡಿದರು.
ಸಂಗೀತ ಸೇವೆಯನ್ನು ಮೃತ್ಯುಂಜಯ ಹಿರೇಮಠ ನಡೆಸಿದರು. ಹೇಮೇಂದ್ರಕುಮಾರ ಹಿರೇಮಠ ತಬಲಾ ಸಾಥ್ ನೀಡಿದರು. ಪ್ರಸಾದದ ಸೇವೆಯನ್ನು ಯಂಕಪ್ಪ ಹೆಬಸೂರ ಹಾಗೂ ಕುಟುಂಬದವರು ವಹಿಸಿದ್ದರು. ಹೆಬಸೂರ ಕುಟುಂಬದವರು ಶರಣೆ ನೀಲಮ್ಮತಾಯಿಯವರಿಗೆ ಕಾಣಿಕೆ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ಕಮಿಟಿ ಸದಸ್ಯರಾದ ಕೊಟ್ರಪ್ಪ ಕಮತರ, ಎಂ.ಎಂ. ಹಿರೇಮಠ ವಕೀಲರು, ಶಿವಣ್ಣ ಕತ್ತಿ, ಮುರಿಗೆಪ್ಪ ನಾಲವಾಡ, ಹಿರಿಯರಾದ ವಿರೂಪಾಕ್ಷಪ್ಪ ಅಕ್ಕಿ, ಬಸವರಾಜ ಜಂತ್ಲಿ, ಶಿವಣ್ಣ ಇಟ್ನಳ್ಳಿ, ಪುರಾಣ ಪ್ರವಚನ ಸಮಿತಿ ಅಧ್ಯಕ್ಷ ಶೇಖಪ್ಪ ಹೊಂಬಳ, ಸಿದ್ದಣ್ಣ ಅರಳಿ, ಗಂಗಾಧರ ಮೇಲಗಿರಿ, ಗಂಗಾಧರ ನಂದಿಕೋಲಮಠ, ಶ್ರಿಶೈಲಪ್ಪ ಪಟ್ಟಣಶೆಟ್ಟಿ, ಸುರೇಶ ಮಾಳವಾಡ, ಪ್ರಭು ಶೆಟ್ಟರ, ಸುಭಾಸ ಹವಳೆ, ವಿರೂಪಾಕ್ಷಪ್ಪ ಅಂಗಡಿ, ಮಲ್ಲಿಕಾರ್ಜುನ ಹಿರೇಮಠ, ಶಂಕರ ನೀರಲಕೇರಿ, ಪಂಚಾಕ್ಷರ ಅಂಗಡಿ, ನವೀನ ನಾಲ್ವಾಡ, ಸುರೇಶ ಹೆಬಸೂರ, ಪ್ರಕಾಶ ಜಂತ್ಲಿ, ಸತ್ಸಂಗದ ಸದಸ್ಯರಾದ ಸುನಂದಾ ಜೋಬಾಳೆ, ಬೀನಾ ಮಾನ್ವಿ, ಉಮಾ ಪಟ್ಟಣಶೆಟ್ಟಿ, ಜಯಶ್ರೀ ನಿಲೂಗಲ್, ಕಸ್ತೂರಕ್ಕ ಮಾನ್ವಿ, ಶರಣಮ್ಮ ಶಿರೂರ, ಸುಶೀಲಾ ನಿಲೂಗಲ್ಲ, ನೀಲಕ್ಕ ಕಗನಳ್ಳಿ, ಅನಸಕ್ಕ ಮೇಲಗಿರಿ, ಕಲ್ಪನಾ ಹಿರೇಮಠ, ಸರಸ್ವತಿ ನಂದಿಕೋಲಮಠ, ಶೈಲಾ ಮಾನ್ವಿ ಮುತಾದವರು ಭಾಗವಹಿಸಿದ್ದರು.