ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಹೃದಯ ಭಾಗದಲ್ಲಿರುವ ಭೀಷ್ಮಕೆರೆಗೆ ನಾಮಫಲಕ ಅಳವಡಿಸಿದ್ದು ಹರ್ಷದಾಯಕವಾಗಿದೆ ಎಂದು ತಾಲೂಕಾ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಸದಸ್ಯರು ಹಾಗೂ ಅಂಬಿಗ ಸಮಾಜದ ಪ್ರಧಾನ ಕಾರ್ಯದರ್ಶಿ ಪ್ರೊ. ಸಂಗಮೇಶ ಹಾದಿಮನಿ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರು ನಗರದ ಭೀಷ್ಮ ಕೆರೆಯನ್ನು ಅಭಿವೃದ್ಧಿಪಡಿಸಿ ಜನರ ಮನಸೆಳೆಯುವಂತೆ ಆಕರ್ಷಕವಾದ ಸ್ಥಳವನ್ನಾಗಿ ಮಾರ್ಪಡಿಸಿದ್ದಾರೆ. ಭೀಷ್ಮ ಕೆರೆಯಲ್ಲಿ ಸುಂದರವಾದ ಬಸವಣ್ಣನವರ ಮೂರ್ತಿ ಹಾಗೂ ಗಂಗಾ-ತುಂಗಾ ಅಕ್ಕ ತಂಗಿಯರ ಮೂರ್ತಿಗಳು ಇತಿಹಾಸವನ್ನು ನೆನಪಿಸುತ್ತದೆ ಎಂದಿದ್ದಾರೆ.
ಗಂಗಾಪುತ್ರ ಭೀಷ್ಮ ಕುಲದವರಾದ ಗಂಗಾಮತ, ಅಂಬಿಗೇರ, ಬಾರಕೇರ, ಸುಣಗಾರ, ಕೋಲಿ, ಬೆಸ್ತ, 39 ಪರ್ಯಾಯ ಪದವುಳ್ಳ ಸಮುದಾಯದ ಜನಾಂಗದವರು ಪ್ರವಾಸೋದ್ಯಮ ಸಚಿವರಿಗೆ ಹಾಗೂ ಜಿಲ್ಲಾಡಳಿತಕ್ಕೆ ಅಭಿನಂದಿಸಿದ್ದಾರೆ.