ನೆಲಮಂಗಲ:- ವೃದ್ಧೆಯೊಬ್ಬರು ಹುಲ್ಲು ಮೇಯಲು ಬಂದ ಹಸುಗಳ ಮೇಲೆ ಆಸಿಡ್ ಎರಚಿ ಪೈಶಾಚಿಕ ಕೃತ್ಯವೆಸಗಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಗುಣಿ ಅಗ್ರಹಾರ ಗ್ರಾಮದಲ್ಲಿ ನಡೆದಿದೆ.
Advertisement
ಆಸಿಡ್ ಎರಚಿದ ಹಿನ್ನೆಲೆಯಲ್ಲಿ 10ಕ್ಕೂ ಹೆಚ್ಚು ಹಸುಗಳು ಗಾಯಗೊಂಡಿದ್ದು, ನೋವು ತಾಳಲಾರದೇ ರೋದಿಸುತ್ತಿವೆ.
ಮನೆ ಬಳಿ ಹುಲ್ಲು ಮೇಯಲು ಬಂದ ಹಸುಗಳ ಮೇಲೆ ಟೈಲ್ಸ್ ಕ್ಲೀನ್ ಮಾಡುವ ಆಸಿಡ್ ಅನ್ನು ವೃದ್ಧೆ ಎರಚಿದ್ದಾಳೆ. ಕಳೆದ 20 ದಿನಗಳಿಂದ ಪ್ರತಿನಿತ್ಯ ಮೇವಿಗಾಗಿ ಹೊರಟ ಹಸುಗಳ ಬೆನ್ನು, ಹೊಟ್ಟೆ ಭಾಗದ ಮೇಲೆ ಒಂದು ರೀತಿಯ ಧ್ರವ ಸೋರಿದ ಹಾಗೆ ಕಾಣುತ್ತಿತ್ತು. ನಂತರ ಗಾಯಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರೈತರು ಏನೋ ರೋಗದ ಲಕ್ಷಣ ಅಂತ ವೈದ್ಯರಿಗೆ ತೋರಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಆದರೆ ಇದು ವೃದ್ಧ ಮಹಿಳೆಯ ಕೃತ್ಯ ಎಂದು ಗ್ರಾಮಸ್ಥರೊಬ್ಬರು ಮಾಹಿತಿ ನೀಡಿದ್ದಾರೆ.