ದಿ. ಪುನೀತರಾಜ್‌ಕುಮಾರ್ ಜನ್ಮದಿನಾಚರಣೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ಮಾದಿಗ ಸಂಘರ್ಷ ಸಮಿತಿ ಗದಗ ಜಿಲ್ಲಾ ಘಟಕದ ವತಿಯಿಂದ ನಗರದ ತಳಗೇರಿ ಓಣಿಯಲ್ಲಿ ಕರ್ನಾಟಕ ರತ್ನ, ಪವರಸ್ಟಾರ್ ದಿ. ಪುನೀತರಾಜ್‌ಕುಮಾರರ 50ನೇ ಜನ್ಮದಿನಾಚರಣೆಯನ್ನು ಆಚರಿಸಿ ಅನ್ನಸಂತರ್ಪಣೆಯನ್ನು ನೆರವೇರಿಸಿದರು.

Advertisement

ಈ ಸಂದರ್ಭದಲ್ಲಿ ಸಮಿತಿಯ ಗದಗ ಜಿಲ್ಲಾಧ್ಯಕ್ಷ ರಾಘವೇಂದ್ರ ಪರಸಪ್ಪ ಪರಾಪೂರ ಮಾತನಾಡಿ, ಕನ್ನಡ ಚಿತ್ರರಂಗದ ಖ್ಯಾತ ನಟ ಪುನೀತರಾಜಕುಮಾರರು ಕರ್ನಾಟಕ ರಾಜ್ಯ ಮತ್ತು ಹೊರರಾಜ್ಯದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರು ಸಮಾಜಮುಖಿ ವ್ಯಕ್ತಿತ್ವವನ್ನು ಹೊಂದಿದ ಸರಳ ಜೀವಿಯಾಗಿದ್ದು ಕೊಡುಗೈ ದಾನಿಯಾಗಿದ್ದರು. ಅವರು ಮಾಡಿದ ಸಮಾಜಮುಖಿ ಕಾರ್ಯಗಳು ಇಂದಿನ ಯುವಜನತೆಗೆ ಮಾದರಿಯಾಗಿದೆ ಎಂದರು.

ಮಾದಿಗ ಸಮಾಜದ ಹಿರಿಯರಾದ ತಾರವ್ವ ದೊಡ್ಡಮನಿ, ಗುಂಡವ್ವ ಗೌಡರ, ಕೆಂಚವ್ವ ಕಟ್ಟಿಮನಿ, ಲಕ್ಷ್ಮವ್ವ ತಿಮ್ಮಾಪೂರ, ಮಾದಿಗ ಸಮಾಜದ ಯುವ ಮಹಿಳೆಯರಾದ ರೇಣುಕಾ ಪರಾಪೂರ, ಗೀತವ್ವ ಪೂಜಾರ, ಕಾವೇರಿ ಪೂಜಾರ, ಸುಮಂಗಲ ಪೂಜಾರ, ಗಣೇಶ ಯಲ್ಲಪ್ಪ ಹುಬ್ಬಳ್ಳಿ, ದೀಪಕ ಆನಂದ ಕಲ್ಮನಿ, ಪರಶುರಾಮ ಲಕ್ಷ್ಮಣ ಸಂಗಾಪೂರ, ವಿಜಯ ಫಕ್ಕೀರಪ್ಪ ಭಜಂತ್ರಿ, ಈಶ್ವರ ಶಿವಪ್ಪ ದೊಡ್ಡಮನಿ, ತುಕರಾಮ ಸುರೇಶ ಕಲ್ಮನಿ, ಜೀವನ ಮಂಜುನಾಥ ಪರಾಪೂರ, ಕೇಶವ ಯಮನಪ್ಪ ಕೋಟ್ನಿಕಲ್, ಶರಣಬಸಯ್ಯ ಹಿರೇಮಠ, ಮಲ್ಲಿಕ ಬೇಪಾರಿ ಮುಂತಾದವರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here