ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ಸುಕ್ಷೇತ್ರ ಬಳಗಾನೂರಿನ ಚಿಕೇನಕೊಪ್ಪದ ಚನ್ನವೀರ ಶರಣರ ಮಠದಲ್ಲಿ ಚನ್ನವೀರ ಶರಣರ 31ನೇ ಪುಣ್ಯಸ್ಮರಣೋತ್ಸವ, ಜಾತ್ರಾ ಮಹೋತ್ಸವದ ಅಂಗವಾಗಿ ಬಳೂಟಿಗಿ ಹಿರೇಮಠದ ಶ್ರೀ ಶಿವಕುಮಾರ ಮಹಾಸ್ವಾಮಿಗಳಿಂದ ಮಹಾತ್ಮರ ಜೀವನ ದರ್ಶನ, ಪ್ರವಚನ ಜರುಗಿತು.
ಇದೇ ಸಂದರ್ಭದಲ್ಲಿ ದಾಟನಾಳ ಗ್ರಾಮದ ಹಾಗೂ ಬಳಗಾನೂರಿನ ಶಾಂಭವಿ ಅಕ್ಕನ ಬಳಗ ಹಾಗೂ ಚನ್ನವೀರ ಶರಣರ ಭೀಮಾಂಬಿಕಾ ಸೇವಾ ಸಮಿತಿ ಹಳೆ ಮಸೂತಿ ಬಡಾವಣೆಯ ಸಮಸ್ತ ಸದ್ಭಕ್ತರಿಂದ ಶಿವಶಾಂತವೀರ ಶರಣರ ತುಲಾಭಾರದ ಭಕ್ತಿಸೇವೆ ಜರುಗಿತು.



