ಅಂಗವಿಕಲರಿಗೆ ವಿತರಣೆಯಾಗದೇ ತುಕ್ಕು ಹಿಡಿತಿವೆ ಮೂರು ಚಕ್ರದ ಬೈಕ್ ಗಳು!

0
Spread the love

ಕಲಬುರ್ಗಿ:- ರಾಜ್ಯಾದ್ಯಂತ ಅಂಗವಿಕಲರಿಗೆ 4 ಸಾವಿರ ಬೈಕ್‌ಗಳನ್ನ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಅವರು ಈ ಹಿಂದಿನ ಬಜೆಟ್ ನಲ್ಲಿ ಘೋಷಣೆ ಮಾಡಿದ್ದರು. ಆದರೆ ಇದು ಫಲಾನುಭವಿಗಳಿಗೆ ಅಷ್ಟಾಗಿ ತಲುಪುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ವಾಹನಗಳು ತುಕ್ಕು ಹಿಡಿಯುತ್ತಿವೆ.

Advertisement

ಜಿಲ್ಲೆಗೆ 4 ಸಾವಿರ ಬೈಕ್‌ಗಳ ಪೈಕಿ 180 ಬೈಕ್‌ಗಳು ಸರಬರಾಜು ಆಗಿ ಏಳು ತಿಂಗಳು ಕಳೆದಿವೆ. ಆದರೆ, ಈ ಏಳು ತಿಂಗಳಿನಿಂದ ಬೈಕ್‌ಗಳು ಫಲಾನುಭವಿಗಳಿಗೆ ನೀಡದೇ ಕಲಬುರಗಿ ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆ ನಿರ್ಲಕ್ಷ್ಯ ಮಾಡಿದೆ.

ಇಲಾಖೆ ಆವರಣದಲ್ಲಿ 180 ಬೈಕ್‌ಗಳನ್ನ ನಿಲ್ಲಿಸಲಾಗಿದ್ದು, ಬಿಸಿಲು, ಮಳೆಗೆ ಬೈಕ್‌ನ ಕಲರ್ ಶೇಡ್ ಆಗಿದ್ದಲ್ಲದೇ ಬಹುತೇಕ ಬೈಕ್‌ಗಳು ನಿಂತಲ್ಲೆ ತುಕ್ಕು ಹಿಡಿದು ಹೋಗಿವೆ.‌ ಅಲ್ಲದೇ ಕೆಲವೊಂದು ಬೈಕ್‌ಗಳ ಟೈರ್ ಗಾಳಿ ಸಹ ಇಳಿದು ಅಧೋಗತಿಗೆ ತಲುಪಿವೆ.

ಇನ್ನು ಇಷ್ಟು ದಿನ ಬೈಕ್ ವಿತರಣೆ ಆಗದಿರೋದಕ್ಕೆ ಅಧಿಕಾರಿಗಳ ಕಳ್ಳಾಟವೇ ಕಾರಣ ಎನ್ನುವ ಆರೋಪ ಕೇಳಿಬಂದಿದೆ.


Spread the love

LEAVE A REPLY

Please enter your comment!
Please enter your name here