ರಾಜ್ಯ ಸರ್ಕಾರ ಸರಿಯಾಗಿ ನಿರ್ವಹಣೆ ಮಾಡಿದ್ರೆ ದುರ್ಘಟನೆ ತಡೆಯಬಹುದಿತ್ತು: ವಿಜಯೇಂದ್ರ

0
Spread the love

ಬೆಂಗಳೂರು: ರಾಜ್ಯ ಸರ್ಕಾರ ಸರಿಯಾಗಿ ನಿರ್ವಹಣೆ ಮಾಡಿದ್ರೆ ದುರ್ಘಟನೆ ತಡೆಯಬಹುದಿತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಗೃಹ ಸಚಿವರು ರಾಜೀನಾಮೆ ಕೊಡುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ರಾಜ್ಯ ಸರ್ಕಾರ ಸರಿಯಾಗಿ ನಿರ್ವಹಣೆ ಮಾಡಿದ್ರೆ ದುರ್ಘಟನೆ ತಡೆಯಬಹುದಿತ್ತು. ಅಹಮದಾಬಾದ್‌ನಲ್ಲಿ ನಡೆದ ಫೈನಲ್ ಮ್ಯಾಚ್‌ನಲ್ಲಿ 1.5 ಲಕ್ಷ ಜನರು ಸೇರಿದ್ರು. ಆದರೆ ಅಲ್ಲಿ ಯಾವುದೇ ಈ ರೀತಿಯ ದುರ್ಘಟನೆ ಆಗಿಲ್ಲ. ಆದರೆ ಬೆಂಗಳೂರಲ್ಲಿ ತಲೆ ತಗ್ಗಿಸುವಂತಹ ಘಟನೆ ನಡೆದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ರಾಜ್ಯ ಸರ್ಕಾರ ಯಾಕೆ ಉತ್ಸಾಹ ಮತ್ತೆ ತರಾತುರಿಯಾಗಿ ಮಾಡ್ತು? ಪೂರ್ವ ತಯಾರಿ ಇಲ್ಲದೇ ಕಾರ್ಯಕ್ರಮ ಮಾಡೋದಕ್ಕೆ ಏಕೆ ಅವಕಾಶ ಮಾಡಿಕೊಡ್ತು? ವಿಧಾನಸೌಧದ ಮುಂದೆ ಆದರೂ ಸಂಭ್ರಮಾಚರಣೆ ಮಾಡುವ ಅವಶ್ಯಕತೆ ಏನಿತ್ತು? ಉಪ ಮುಖ್ಯಮಂತ್ರಿಗಳು ಮಾಡಿದ್ರೋ, ಮುಖ್ಯಮಂತ್ರಿಗಳು ಮಾಡಿದ್ರೋ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಪ್ರಶ್ನಿಸಿದರು.


Spread the love

LEAVE A REPLY

Please enter your comment!
Please enter your name here