ಬೆಳಗಾವಿ: ರವಿಯವರು ಬಳಸಿರುವ ಪದ ಕ್ರಿಮಿನಲ್ ಅಫೆನ್ಸ್ ಅನಿಸಿಕೊಳ್ಳುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಶ್ಲೀಲ ಪದ ಬಳಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಬೆಳಗಾವಿ ಸುವರ್ಣ ಸೌಧದ ಬಳಿ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ ಅವರು, ಆ ಸಮಯದಲ್ಲಿ ತಾನು ಮೇಲ್ಮನೆಯಲ್ಲಿರಲಿಲ್ಲ, ಅದರೆ ಶಾಸಕರು ತಮಗೆ ವಿಷಯ ತಿಳಿಸಿದರು, ಲಕ್ಷ್ಮಿಯವರು ತುಂಬಾ ನೊಂದುಕೊಂಡಿದ್ದಾರೆ.
Advertisement
ಸಿ.ಟಿ.ರವಿ ತೀರಾ ಕೆಟ್ಟ ಪದ ಬಳಸಿದ್ದಾರೆ. ರವಿ ವಿರುದ್ಧ ಸೂಕ್ತ ಕ್ರಮ ಆಗಲೇಬೇಕು. ಈಗಾಗಲೇ ಸಭಾಪತಿಗೆ ಸಚಿವೆ ಹೆಬ್ಬಾಳ್ಕರ್ ದೂರು ನೀಡಿದ್ದಾರೆ ಎಂದು ತಿಳಿಸಿದರು. ಇನ್ನು ಸಿ.ಟಿ.ರವಿ ನೀಡಿರುವ ಹೇಳಿಕೆ ಕ್ರಿಮಿನಲ್ ಅಪರಾಧ. ಪೊಲೀಸರಿಗೂ ದೂರು ನೀಡಲಿದ್ದಾರೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಕಾನೂನು ರೀತಿಯಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.