ಸರಕಾರಿ ಶಾಲೆಯ ಕಾರ್ಯ ಶ್ಲಾಘನೀಯ : ಇಮಾಮಸಾಬ ಗಾಡಗೋಳಿ

0
school
Spread the love

ವಿಜಯಸಾಕ್ಷಿ ಸುದ್ದಿ, ಮುಳಗುಂದ : ಬೇಸಿಗೆ ಆರಂಭವಾಗುತ್ತಿದ್ದಂತೆ ನೀರಿನ ದಾಹ ಹೆಚ್ಚುತ್ತಿದ್ದು, ಬಿಸಿಲಿಗೆ ಬಸವಳಿದ ಜನರಿಗಾಗಿ ನಿತ್ಯ ಶುದ್ಧ ಕುಡಿಯುವ ನೀರಿನ ಅರವಟ್ಟಿಗೆ ಸ್ಥಾಪನೆ ಮಾಡಿರುವ ಕಾರ್ಯ ಶ್ಲಾಘನೀಯ ಎಂದು ಸಿಆರ್‌ಪಿ ಇಮಾಮಸಾಬ ಗಾಡಗೋಳಿ ಹೇಳಿದರು.

Advertisement

ಅವರು ಪಟ್ಟಣದ ಕಣವಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ವೃಂದದಿಂದ ಶುದ್ಧ ಕುಡಿಯುವ ನೀರಿನ ಅರವಟ್ಟಿಗೆ ಉದ್ಘಾಟಿಸಿ ಮಾತನಾಡಿ, ಬೇಸಿಗೆ ಇರುವುದರಿಂದ ನೀರಿಗಾಗಿ ಅಲೆದಾಡುವ ಸ್ಥಿತಿ ನಿರ್ಮಾಣವಾಗುತ್ತಿದೆ. ಈ ಸಂದರ್ಭದಲ್ಲಿ ಶಾಲೆಯ ಮಕ್ಕಳಿಗೆ ಹಾಗೂ ಶಾಲೆಯ ಮುಂಭಾಗದಲ್ಲಿ ಸಾರ್ವಜನಿಕರಿಗಾಗಿ ಶುದ್ಧ ಕುಡಿಯುವ ನೀರಿನ ಅರವಟ್ಟಿಗೆ ಸ್ಥಾಪಿಸಿ ನೀರಿನ ದಾಹ ನೀಗಿಸುತ್ತಿರುವ ಈ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.

ಶಾಲಾ ಪ್ರಧಾನ ಗುರುಮಾತೆ ಎಲ್.ಪಿ. ಕಟ್ಟಿಮನಿ, ಆರ್.ಬಿ. ಕಟ್ಟಿಮನಿ, ಎಸ್.ಎಚ್. ಹೊಸಮನಿ, ಎನ್.ವಿ. ಗಿರಿರಡ್ಡಿ, ಟಿ.ಆರ್. ಹೊಂಬಳ, ರತ್ನಾ ಗುಂಜಳ, ವಾಯ್.ಬಿ. ಗೋವಣ್ಣವರ ಇದ್ದರು.

 


Spread the love

LEAVE A REPLY

Please enter your comment!
Please enter your name here