ನವದೆಹಲಿ: ಭಾರತದ ಸಂಘಟನಾ ಮತ್ತು ನಾವೀನ್ಯತೆ ಕೌಶಲ್ಯಗಳನ್ನು ಜಗತ್ತು ಗಮನಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದ ಸಂಘಟನಾ ಮತ್ತು ನಾವೀನ್ಯತೆ ಕೌಶಲ್ಯಗಳನ್ನು ಜಗತ್ತು ಗಮನಿಸುತ್ತಿದೆ. ಜಗತ್ತು ಈ ಭಾರತವನ್ನು ವಿವರವಾಗಿ ತಿಳಿದುಕೊಳ್ಳಲು ಬಯಸುತ್ತದೆ.
ಭಾರತವು ವಿಶ್ವದ 7ನೇ ಅತಿದೊಡ್ಡ ಕಾಫಿ ರಫ್ತುದಾರ ರಾಷ್ಟ್ರವಾಗಿದೆ ದಶಕಗಳಿಂದ, ಜಗತ್ತು ಭಾರತವನ್ನು ತನ್ನ ಬ್ಯಾಕ್ ಆಫೀಸ್ ಎಂದು ಕರೆಯುತ್ತಿತ್ತು. ಆದರಿಂದು ಭಾರತವು ವಿಶ್ವದ ಹೊಸ ಕಾರ್ಖಾನೆಯಾಗುತ್ತಿದೆ. ನಾವು ಕೇವಲ ಕಾರ್ಯಪಡೆಯಲ್ಲ, ನಾವು ವಿಶ್ವ ಶಕ್ತಿಯಾಗಿದ್ದೇವೆ ಎಂದು ಬಣ್ಣಿಸಿದ್ದಾರೆ.
ಆ ಕಾಲದ ಸರ್ಕಾರ ಮತ್ತು ನಾಯಕರ ಬಗ್ಗೆ ನಾನು ಹೇಳಲು ಏನೂ ಇಲ್ಲ, ಇಂತಹ ಕಾನೂನಿನ ಬಗ್ಗೆ ಈ ಜನರು 75 ವರ್ಷಗಳ ಕಾಲ ಏಕೆ ಮೌನವಾಗಿದ್ದರು? ಎಂಬುದು ನನಗೆ ಹೆಚ್ಚಾಗಿ ಆಶ್ಚರ್ಯವಾಗಿದೆ. ಗುಲಾಮಗಿರಿ ಯುಗದ ಕಾನೂನುಗಳನ್ನು ರದ್ದುಗೊಳಿಸಿದ್ದು ನಮ್ಮ ಸರ್ಕಾರ ಎಂದರು.