ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ವ್ಯಕ್ತಿ ತನ್ನಲ್ಲಿನ ಕ್ರೀಡಾ ಸಾಮರ್ಥ್ಯ ಪ್ರದರ್ಶಿಸಲು ಅವನಿಗೆ ವಯಸ್ಸಿನ ಯಾವುದೇ ಮಿತಿ ಅಡ್ಡ ಬರುವುದಿಲ್ಲ. ಅವನಲ್ಲಿ ಮನೋ ಸಾಮರ್ಥ್ಯವಿದ್ದರೆ ಆತ ಯಾವಾಗ ಬೇಕಾದರೂ ತನ್ನಲ್ಲಿನ ಕ್ರೀಡಾ ಸಾಮರ್ಥ್ಯವನ್ನು ಪ್ರದರ್ಶಿಸಬಹುದು ಎಂದು ಅಬ್ಬಿಗೇರಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಗುರುನಾಥ ಅವರೆಡ್ಡಿ ಹೇಳಿದರು.
ಸಮೀಪದ ಅಬ್ಬಿಗೇರಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಅಬ್ಬಿಗೇರಿ ಇವರ ಸಂಯುಕ್ತ ಆಶ್ರಯದಲ್ಲಿ ರೋಣ-ಗಜೇಂದ್ರಗಡ ತಾಲೂಕಿನ 45 ವರ್ಷ ಮೇಲ್ಪಟ್ಟ ಲೆಜೆಂಡ್ಸ್ ಆಟಗಾರರ ಟೂರ್ನಿಯ ನಿಮಿತ್ತ ಅಬ್ಬಿಗೇರಿ ಲೆಜೆಂಡ್ಸ್ ತಂಡದ ಆಟಗಾರರಿಗೆ ಜರ್ಸಿ ವಿತರಣೆ ಮಾಡಿ ಅವರು ಮಾತನಾಡಿದರು.
ಜಿ.ಪಂ. ಮಾಜಿ ಸದಸ್ಯ ಸೋಮಣ್ಣ ಹರ್ಲಾಪೂರ ಮಾತನಾಡಿ, ಕ್ರೀಡೆಗಳು ಸಾಮಾಜಿಕ ಬೆಳವಣಿಗೆಗೆ ಸಹಾಯಕವಾಗುತ್ತವೆ. ನಲವತ್ತೆತ್ತರದ ನಂತರವೂ ವ್ಯಕ್ತಿ ತಾನು ಇಚ್ಛಿಸಿದ ಆಟಗಳಲ್ಲಿ ಪಾಲ್ಗೊಂಡು ಸಂತೋಷಪಡಬಹುದು ಎಂಬುದನ್ನು ಈ ಟೂರ್ನಿ ಸಾಬೀತುಪಡಿಸಲಿದೆ ಎಂದರು.
ಈ ವೇಳೆ ಡಾ. ಆರ್.ಬಿ. ಬಸವರಡ್ಡೇರ, ಸಂಜಯ್ ರಡ್ಡೇರ, ಬಸವರಾಜ ಬಾರಕೇರ, ದೇವಪ್ಪ ಅಸುಂಡಿ, ಬಸವರಾಜ ಪಲ್ಲೇದ, ಸುರೇಶ ಬಸವರಡ್ಡೇರ, ಅಂದಪ್ಪ ವೀರಾಪೂರ, ಸುರೇಶ ಶಿರೋಳ, ಉಮೇಶ ಅವರೆಡ್ಡಿ, ಶರಣು ಯಲ್ಲಿರೆಡ್ಡಿ, ಅಂದಪ್ಪ ನೀರಲೋಟಿ, ರಾಜು ಬೆಂಗಳೂರಶೆಟ್ಟ್ರ, ಚರಂತಯ್ಯ ಬೆನಹಾಳ, ಶೇಖಪ್ಪ ಜುಟ್ಲ, ಮಳ್ಳಪ್ಪ ದ್ವಾಸಲ್, ರಫೀಕ್ ರೇವಡಿ, ಚಂದ್ರು ಅಕ್ಕಸಾಲಿ, ಸಂಜಯ್ಶಾಸ್ತ್ರೀ, ಉಮೇಶ ಶಿರೋಳ, ಜಗದೀಶ ಶಿರೋಳ, ಮಹೇಶ ಹರ್ಲಾಪೂರ ಇನ್ನಿತರರಿದ್ದರು.


