ಬೆಂಗಳೂರು: ಸಿಎಂಗೂ ಶಾಸಕರಿಗೂ ಯಾವುದೇ ಗೊಂದಲ ಇಲ್ಲ ಎಂದು ಸಚಿವ ಪರಮೇಶ್ವರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸರ್ಕಾರದಲ್ಲಿ ಯಾವುದೇ ಗೊಂದಲಗಳು ಇಲ್ಲ. ಸಿಎಂಗೂ ಶಾಸಕರಿಗೂ ಯಾವುದೇ ಗೊಂದಲ ಇಲ್ಲ.
Advertisement
ಕೆಲ ಶಾಸಕರು ತಮ್ಮ ಕ್ಷೇತ್ರದ ಬಗ್ಗೆ ಮಾತಾಡಿದ್ದಾರೆ ಅಷ್ಟೇ ಇದಕ್ಕೆ ಇಡೀ ಸರ್ಕಾರವೇ ಗೊಂದಲ ಅಂತ ಹೇಳೋದು ಸರಿಯಲ್ಲ. ಸಿಎಂ ಅವರು ಇದೆಲ್ಲವನ್ನೂ ನೋಡ್ತಾರೆ ಎಂದು ಹೇಳಿದ್ದಾರೆ.
ಇನ್ನೂ ಸಚಿವರು ಕೈಗೆ ಸಿಗುತ್ತಿಲ್ಲ ಎಂಬ ಶಾಸಕರ ಆರೋಪಕ್ಕೆ ನಾನು ಎಲ್ಲರಿಗೂ ಸಿಕ್ತೀನಿ. ಕಚೇರಿಯಲ್ಲಿ, ಮನೆಯಲ್ಲಿ ಸಿಕ್ತೀನಿ. ನನಗೇನು ಸಮಸ್ಯೆ ಇಲ್ಲ. ಬೇರೆ ಸಚಿವರು ಸಿಗೊಲ್ಲ ಅನ್ನೋ ಬಗ್ಗೆ ನಾನು ಹೇಗೆ ಹೇಳಲಿ? ಬೇರೆ ಸಚಿವರ ಬಗ್ಗೆ ನಾನು ಮಾತಾಡೊಲ್ಲ ಎಂದಿದ್ದಾರೆ.