ಶಿರಹಟ್ಟಿ: ದೇವಸ್ಥಾನವೊಂದರ ಬೀಗ ಮುರಿದ ಕಳ್ಳರು, ಚಿನ್ನದ ಸರ ಹಾಗೂ ಬೆಳ್ಳಿ ಕಿರೀಟವನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.
Advertisement
ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹೊಳಲಮ್ಮ ದೇವಸ್ಥಾನದಲ್ಲಿ ಈ ಕಳ್ಳತನ ಜರುಗಿದ್ದು, ಅಂದಾಜು ಒಂದು ಕೆಜಿ ತೂಕದ ಬೆಳ್ಳಿ ಕಿರೀಟ, 20 ಗ್ರಾಂ ಚಿನ್ನದ ಸರ ಕಳ್ಳತನ ಮಾಡಲಾಗಿದೆ.
ದೇವಸ್ಥಾನ ನವೀಕರಣ ಮಾಡಲಾಗುತ್ತಿದ್ದು, ಸಿಸಿ ಟಿವಿ ಬಂದ್ ಮಾಡಲಾಗಿದೆ.
ಸಿಸಿಟಿವಿ ಬಂದ್ ಆಗಿದ್ದನ್ನು ಗಮನಿಸಿ ಖದೀಮರು ಈ ಕೃತ್ಯ ಮಾಡಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಶಿರಹಟ್ಟಿ ಸಿಪಿಐ ನಾಗರಾಜ್ ಮಾಡಳ್ಳಿ, ಪಿಎಸ್ಐ ರಿತ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.