ಖದೀಮರ ಕೈ ಚಳಕ: ದೇವಸ್ಥಾನದ ಬೆಳ್ಳಿ ಕಿರೀಟ, ಚಿನ್ನದ ಸರ ಕಳ್ಳತನ

0
Spread the love

ಶಿರಹಟ್ಟಿ: ದೇವಸ್ಥಾನವೊಂದರ ಬೀಗ ಮುರಿದ ಕಳ್ಳರು, ಚಿನ್ನದ ಸರ ಹಾಗೂ ಬೆಳ್ಳಿ ಕಿರೀಟವನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.

Advertisement

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹೊಳಲಮ್ಮ ದೇವಸ್ಥಾನದಲ್ಲಿ ಈ ಕಳ್ಳತನ ಜರುಗಿದ್ದು, ಅಂದಾಜು ಒಂದು ಕೆಜಿ ತೂಕದ ಬೆಳ್ಳಿ ಕಿರೀಟ, 20 ಗ್ರಾಂ ಚಿನ್ನದ ಸರ ಕಳ್ಳತನ ಮಾಡಲಾಗಿದೆ.

ದೇವಸ್ಥಾನ ನವೀಕರಣ ಮಾಡಲಾಗುತ್ತಿದ್ದು, ಸಿಸಿ ಟಿವಿ ಬಂದ್ ಮಾಡಲಾಗಿದೆ.

ಸಿಸಿಟಿವಿ ಬಂದ್ ಆಗಿದ್ದನ್ನು ಗಮನಿಸಿ ಖದೀಮರು ಈ ಕೃತ್ಯ ಮಾಡಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಶಿರಹಟ್ಟಿ ಸಿಪಿಐ ನಾಗರಾಜ್ ಮಾಡಳ್ಳಿ, ಪಿಎಸ್ಐ ರಿತ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Spread the love

LEAVE A REPLY

Please enter your comment!
Please enter your name here