ಹರಪನಹಳ್ಳಿ ತಾಲೂಕಿನಲ್ಲಿ ಕಳ್ಳರ ಕೈಚಳಕ: ಮೂರು ಮನೆಗಳ ಬೀಗ ಮುರಿದು ಕಳ್ಳತನ

0
Spread the love

ದಾವಣಗೆರೆ: ಮೂರು ಮನೆಗಳ ಬೀಗ ಮುರಿದು ಕಳ್ಳತನ ಮಾಡಿರುವ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ KHB ಬಡಾವಣೆಯಲ್ಲಿ ನಡೆದಿದೆ. ಉಪನ್ಯಾಸಕ ಬುಳ್ಳಪ್ಪ, ವಿರೇಶ ನಾಯಕ, ಯೋಧ ಅಡಿವೆಪ್ಪ ಸೇರಿ ಮೂವರ ಮನೆಯಲ್ಲಿ ಕಳ್ಳತನ ಮಾಡಿದ್ದು, ಕಳ್ಳರ ಕೈಚಳಕಕ್ಕೆ ಸ್ಥಳೀಯರು ಆತಂಕ ಗೊಂಡಿದ್ದಾರೆ. ಉಪನ್ಯಾಸಕ ಬುಳ್ಳಪ್ಪ ಮನೆಯಲ್ಲಿ ಒಟ್ಟು 14 ಲಕ್ಷ ಮೌಲ್ಯದ 20 ತೊಲೆ ಬಂಗಾರ, 15 ತೊಲೆ ಬೆಳ್ಳಿ ಆಭರಣಗಳು ಹಾಗೂ 8 ಸಾವಿರ ನಗದನ್ನು ಕಳ್ಳರು ಕದ್ದೊಯ್ದಿದ್ದಾರೆ.

Advertisement

ಉಪನ್ಯಾಸ ವೀರೇಶ್ ನಾಯಕ ಬೇರೆ ಊರಿಗೆ ತೆರಳಿದ್ರಿಂದ ಏನೆಲ್ಲ ಕಳ್ಳತನ ಆಗಿದೆ ಅನ್ನೋದು ಕಂಡುಬಂದಿಲ್ಲ, ಯೋಧ ಅಡಿವೆಪ್ಪ ಮನೆಯಲ್ಲಿ ಏನೂ ಸಿಗದೇ ಇರುವುದರಿಂದ ಕಳ್ಳರು ಬೀರುವಿನ ಡ್ರಾ ಕಿತ್ತು ಬಿಸಾಕಿ ಹೋಗಿದ್ದಾರೆ. ಘಟನಾ ಸ್ಥಳಕ್ಕೆ ಹೊಸಪೇಟೆ ಬೆರಳಚ್ಚು ತಜ್ಞರು, ಶ್ವಾನದಳ ತಂಡ ದೌಡಾಯಿಸಿದ್ದು, ಡಿವೈಎಸ್ಪಿ ವೆಂಕಟಪ್ಪ ನಾಯಕ ಮತ್ತವರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಘಟನೆ ಸಂಬಂಧ ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here