ನಮ್ಮ ಸೇನೆಯ ವೀರ ಸೈನಿಕರಿಗೆ ಈ ದೇಶ ಸದಾ ಋಣಿಯಾಗಿರುತ್ತದೆ: ಪ್ರಧಾನಿ ಮೋದಿ

0
Spread the love

ಕಾರ್ಗಿಲ್: 1999ರ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಕಾರ್ಗಿಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಶ್ರದ್ಧಾಂಜಲಿ ಸಲ್ಲಿಸಿದರು. ನಂತರ ಅವರು ಮಾತನಾಡಿದರು. ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಸೈನಿಕರು ಮಾಡಿದ ತ್ಯಾಗ ಅಮರ ಮತ್ತು ಕಾರ್ಗಿಲ್ ವಿಜಯ್ ದಿವಸ್ ರೂಪದಲ್ಲಿ ಸದಾ ನೆನಪಿನಲ್ಲಿ ಉಳಿಯುತ್ತದೆ ಎಂದರು.

Advertisement

ಇನ್ನೂ ಇಂದು ಕಾರ್ಗಿಲ್ ವಿಜಯದ 25 ವರ್ಷಗಳಿಗೆ ಮಹಾನ್ ಭೂಮಿ ಲಡಾಖ್ ಸಾಕ್ಷಿಯಾಗಿದೆ. ದೇಶಕ್ಕಾಗಿ ಮಾಡಿದ ಅವರ ತ್ಯಾಗ ಎಂದಿಗೂ ಅಮರ ಎಂದು ಕಾರ್ಗಿಲ್ ವಿಜಯ್ ದಿವಸ್ ಹೇಳುತ್ತದೆ. ನಮ್ಮ ಸೇನೆಯ ವೀರ ಸೈನಿಕರಿಗೆ ಈ ದೇಶ ಸದಾ ಋಣಿಯಾಗಿರುತ್ತದೆ. ಹುತಾತ್ಮರಿಗೆ ದೇಶ ಆಭಾರಿಯಾಗಿದೆ. ಕಾರ್ಗಿಲ್ ಯುದ್ಧದ ಸಮಯದಲ್ಲಿ ನಾನು ನಮ್ಮ ಸೈನಿಕರ ನಡುವೆ ಒಬ್ಬ ಸಾಮಾನ್ಯ ದೇಶವಾಸಿಯಾಗಿದ್ದೆ ಎಂಬುದು ನನ್ನ ಅದೃಷ್ಟ ಎಂದು ಮೋದಿ ಹೇಳಿದರು.

ನಮ್ಮ ಕೆಚ್ಚೆದೆಯ ಯೋಧರು ಭಯೋತ್ಪಾದನೆಯನ್ನು ಹತ್ತಿಕ್ಕುತ್ತಾರೆ. ಶತ್ರುಗಳಿಗೆ ತಕ್ಕ ಉತ್ತರ ನೀಡುತ್ತಾರೆ. ಲಡಾಖ್, ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಯಲ್ಲಿನ ಪ್ರತಿಯೊಂದು ಅಡೆತಡೆಗಳನ್ನೂ ಭಾರತ ತೊಡೆದುಹಾಕಿದೆ. ಇನ್ನೇನು ಕೆಲವೇ ದಿನಗಳಲ್ಲಿ ಅಂದರೆ ಆಗಸ್ಟ್ 5ಕ್ಕೆ 370ನೇ ವಿಧಿ ರದ್ದಾಗಿ 5 ವರ್ಷವಾಗುತ್ತದೆ ಎಂದರು.

 


Spread the love

LEAVE A REPLY

Please enter your comment!
Please enter your name here