ಬೆಳಗಾವಿ: ಕೆಲಸ ಮಾಡುವವರಿಗೆ ಪ್ರಧಾನ ಮಂತ್ರಿ ಹುದ್ದೆ ಕೊಟ್ಟರೆ ಮಾತ್ರ ಈ ದೇಶ ಉಳಿಯುತ್ತದೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ಇದುವರೆಗೂ ಒಂದೇ ಒಂದು ಸುದ್ದಿಗೋಷ್ಠಿ ನಡೆಸಿಲ್ಲ. ದೇಶದ ಆರ್ಥಿಕ ಸ್ಥಿತಿ, ಜಿಡಿಪಿ ಬಗ್ಗೆ ಮುಕ್ತವಾಗಿ ಎಂದೂ ಮಾತನಾಡಿಲ್ಲ.
ರಾಹುಲ್ಗಾಂಧಿ-ಮೋದಿ ಅವರು ಐದು ಗಂಟೆ ಡಿಬೆಟ್ ಮಾಡಲಿ ಎಂದು ಸವಾಲು ಹಾಕಿದ ಅವರು, ಬಿಜೆಪಿಯಲ್ಲಿ ಕೆಲಸ ಮಾಡುವವರಿಗೆ ಪ್ರಧಾನ ಮಂತ್ರಿ ಹುದ್ದೆ ಕೊಟ್ಟರೆ ಮಾತ್ರ ಈ ದೇಶ ಉಳಿಯುತ್ತದೆ. ಪ್ರಧಾನಿ ಬದಲಾದರೆ ದೇಶದ ಆರ್ಥಿಕ ಪರಿಸ್ಥಿತಿ ಉಳಿಯುತ್ತದೆ. ಯುವಕರು ಉಳಿಯುತ್ತಾರೆ’ ಎಂದರು.
ಮೋದಿ ಅವರಿಗೆ 75 ವರ್ಷ ವಯಸ್ಸಾಯ್ತು, ಗಡ್ಕರಿ ಅಥವಾ ಬೇರೆ ಯಾರಿಗಾದರೂ ಪ್ರಧಾನಿ ಹುದ್ದೆ ನೀಡಲಿ’ಎಂದು ಸಲಹೆ ನೀಡಿದ ಅವರು, ‘ಪ್ರಧಾನಿಗಳು ತಮ್ಮ ಪಬ್ಲಿಸಿಟಿಗೆ ಆರು ಸಾವಿರ ಕೋಟಿ ಖರ್ಚು ಮಾಡುತ್ತಾರೆ. ಖೇಲೋ ಇಂಡಿಯಾಗೂ ಅಷ್ಟು ದುಡ್ಡು ಕೊಡಲ್ಲ ಎಂದು ಟೀಕಿಸಿದ್ದಾರೆ.