HomeEntertainment‘ಅಖಂಡ 2’ ನಲ್ಲಿ ಬಾಲಯ್ಯನ ಕನ್ನಡ ಡೈಲಾಗ್‌ ಕೇಳಬೇಕು ಎಂದುಕೊಂಡವ್ರಿಗೆ ನಿರಾಸೆ: ತಪ್ಪು ತಪ್ಪಾಗಿ ಕನ್ನಡ...

‘ಅಖಂಡ 2’ ನಲ್ಲಿ ಬಾಲಯ್ಯನ ಕನ್ನಡ ಡೈಲಾಗ್‌ ಕೇಳಬೇಕು ಎಂದುಕೊಂಡವ್ರಿಗೆ ನಿರಾಸೆ: ತಪ್ಪು ತಪ್ಪಾಗಿ ಕನ್ನಡ ಉಚ್ಚರಿಸಿದ ಸ್ಟಾರ್

For Dai;y Updates Join Our whatsapp Group

Spread the love

‘ಅಖಂಡ 2’ ಸಿನಿಮಾ ತೆರೆಗೆ ಬಂದ ಕೂಡಲೇ ಹಲವು ಕಾರಣಗಳಿಂದ ಸುದ್ದಿಯಾಗುತ್ತಿದೆ. ಬೋಯಪತಿ ಶ್ರೀನು ನಿರ್ದೇಶನದ ಈ ಚಿತ್ರದಲ್ಲಿ ನಂದಮೂರಿ ಬಾಲಕೃಷ್ಣ ಅವರ ಮಾಸ್ ಇಮೇಜ್‌ಗೆ ತಕ್ಕಂತಹ ಡೈಲಾಗ್‌ಗಳು ಮತ್ತು ದೃಶ್ಯಗಳು ಗಮನ ಸೆಳೆದಿವೆ. ಅದರಲ್ಲೂ ಕನ್ನಡದ ಬಗ್ಗೆ ಮಾತನಾಡುವ ಒಂದು ದೃಶ್ಯ ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಡಾ. ರಾಜ್‌ಕುಮಾರ್ ಕುಟುಂಬದೊಂದಿಗೆ ಬಾಲಯ್ಯ ಹೊಂದಿರುವ ಆತ್ಮೀಯತೆ ಹಿನ್ನೆಲೆ ಕನ್ನಡದ ಬಗ್ಗೆ ಬಂದ ಡೈಲಾಗ್ ಪ್ರೇಕ್ಷಕರಿಗೆ ಖುಷಿ ತಂದಿದೆ. ಚಿತ್ರಮಂದಿರಗಳಲ್ಲಿ ಈ ದೃಶ್ಯಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹಲವರು ಶಿಳ್ಳೆ–ಚಪ್ಪಾಳೆ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ.

ಆದರೆ, ಇದೇ ದೃಶ್ಯದಲ್ಲಿನ ಕೆಲವು ಉಚ್ಚಾರಣಾ ದೋಷಗಳು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಕಾರಣವಾಗಿವೆ. ಕನ್ನಡ ಭಾಷೆಯ ಮಹತ್ವವನ್ನು ಸಾರುವ ಮಾತುಗಳಲ್ಲಿ ಶಬ್ದಗಳ ಸ್ಪಷ್ಟತೆ ಕೊರತೆಯಿರುವುದು ಕನ್ನಡಿಗರ ಗಮನ ಸೆಳೆದಿದೆ. ಭಾಷೆಯ ಮೇಲಿರುವ ಗೌರವಕ್ಕೆ ಸಂಶಯವಿಲ್ಲದಿದ್ದರೂ, ಡಬ್ಬಿಂಗ್ ಹಂತದಲ್ಲೇ ಉಚ್ಚಾರಣೆಯನ್ನು ಸರಿಪಡಿಸಿದ್ದರೆ ಇನ್ನಷ್ಟು ಪರಿಣಾಮಕಾರಿ ಆಗುತ್ತಿತ್ತು ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.

ಹೀಗಾಗಿ, ‘ಅಖಂಡ 2’ನಲ್ಲಿ ಬಂದ ಕನ್ನಡ ಡೈಲಾಗ್ ಮೆಚ್ಚುಗೆಯ ಜೊತೆಗೆ ಚರ್ಚೆಗೂ ಕಾರಣವಾಗಿದ್ದು, ಸಿನಿಮಾದ ಸುತ್ತ ಮತ್ತಷ್ಟು ಕುತೂಹಲ ಮೂಡಿಸಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!