ಮನೆಯ ಗೋಡೆ ಕುಸಿದು ಮಲಗಿದ್ದಲೇ ಮೂವರು ಧಾರುಣ ಸಾವು!

0
Spread the love

ಹಾವೇರಿ :- ಕರ್ನಾಟಕದಲ್ಲಿ ಮಳೆಯ ಅವಾಂತರ ಮುಂದುವರಿದಿದೆ. ಇದೀಗ ಜಿಲ್ಲೆಯ ಸವಣೂರು ತಾಲೂಕಿನ ಮಾದಾಪುರ ಗ್ರಾಮದಲ್ಲಿ ನಿರಂತರವಾಗಿ ಸರಿಯುತ್ತಿರುವ ಮಳೆಯಿಂದ ಮನೆ ಕುಸಿದು ಬಿದ್ದು ಪರಿಣಾಮ ಮಹಿಳೆ ಸೇರಿ ಅವಳಿ-ಜವಳಿ ಕಂದಮ್ಮಳು ಸಾವನ್ನಪ್ಪಿವೆ.

Advertisement

ಒಂದೂವರೆ ವರ್ಷದ ಅಮೂಲ್ಯ ಮತ್ತು ಅನನ್ಯ ಹಾಗೂ 30 ವರ್ಷದ ಚನ್ನಮ್ಮ ಸಾವನ್ನಪ್ಪಿದ ದುದೈವಿಗಳಾಗಿದ್ದು, ಘಟನೆಯಲ್ಲಿ ಯಲ್ಲವ್ವ ಹರಕೂನಿ (55), ಮುತ್ತು ಹರಕೂನಿ (35), ಸುನೀತಾ ಮುತ್ತು ಹರಕೂನಿ (28) ಎಂಬವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ನಿರಂತರ ಸುರಿಯುತ್ತಿರುವ ಮಳೆ ಹಿನ್ನಲೆ ಮಣ್ಣಿನ ಮನೆಯ ಗೋಡೆ ಕುಸಿದಿದ್ದು, ಮಣ್ಣಿನಡಿ ಉಸಿರುಗಟ್ಟಿ ಕೊನೆಯುಸಿರೆಳೆದಿದ್ದಾರೆ. ಸವಣೂರು ಪೋಲಿಸ್ ಠಾಣೆಯಲ್ಲಿ ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ಘಟನೆ ಸಂದರ್ಭದಲ್ಲಿ ಮನೆಯಲ್ಲಿ 7 ಮಂದಿ ಮಲಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.


Spread the love

LEAVE A REPLY

Please enter your comment!
Please enter your name here