Crime News: ಮೂವರು ಹಂತಕರಿಂದ ಶಿಕ್ಷಕಿಯ ಕತ್ತು ಕೊಯ್ದು ಬರ್ಬರ ಕೊಲೆ!

0
Spread the love

ಕೋಲಾರ:- ಶಿಕ್ಷಕಿಯ ಕತ್ತು ಕೊಯ್ದು ಮೂವರು ಹಂತಕರು ಕೊಲೆ ಮಾಡಿರುವ ಘಟನೆ ಕೋಲಾರದಲ್ಲಿ ಜರುಗಿದೆ.

Advertisement

ಜಿಲ್ಲೆಯ ಮುಳಬಾಗಿಲಿನ ಮುತ್ಯಾಲಪೇಟೆ ಲೇಔಟ್​ನಲ್ಲಿ ನಡೆದಿದೆ. ದಿವ್ಯಶ್ರೀ (42) ಕೊಲೆಯಾದ ಶಿಕ್ಷಕಿ. ಮನೆಯಲ್ಲಿ ಮಗಳ ಜೊತೆ ಇದ್ದಾಗ ಕೊಲೆ ಮಾಡಲಾಗಿದೆ. ಮಗಳನ್ನೂ ಹತ್ಯೆಗೈಯಲು ಯತ್ನಿಸಿದ್ದು ಅದೃಷ್ಟವಶಾತ್ ಬಚಾವ್​ ಆಗಿದ್ದಾರೆ. ಘಟನಾ ಸ್ಥಳಕ್ಕೆ ಕೋಲಾರ ಎಸ್​ಪಿ ನಿಖಿಲ್​.ಬಿ, ಎಫ್​ಎಸ್​ಎಲ್‌ ಹಾಗೂ ಶ್ವಾನದಳದ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದೆ ಎನ್ನಲಾಗಿದೆ.

ಮೃತ ದಿವ್ಯಶ್ರೀ ಮುಡಿಯನೂರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಪತಿ ಪದ್ಮನಾಭ್ ಉದ್ಯಮಿ ಆಗಿದ್ದಾರೆ. ಶಿಕ್ಷಕಿ ಕೊಲೆಯಿಂದ ಸದ್ಯ ಮುಳಬಾಗಿಲು ಜನರು ಬೆಚ್ಚಿಬಿದಿದ್ದಾರೆ ಎಂದು ತಿಳಿದು ಬಂದಿದೆ.


Spread the love

LEAVE A REPLY

Please enter your comment!
Please enter your name here