ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ಶಿವಾನಂದ ನಗರದ ಬಸವ ಸಮುದಾಯ ಭವನದಲ್ಲಿ ಫೆ. 9ರಂದು ಬೆಳಿಗ್ಗೆ 7.30ಕ್ಕೆ ನಡೆಯಲಿರುವ ಬಸವದಳದ 1632ನೇ ಶರಣ ಸಂಗಮದಲ್ಲಿ ಇಷ್ಟಲಿಂಗಯೋಗದ ಪ್ರಾತ್ಯಕ್ಷಿಕೆ, ಶರಣ ಮಡಿವಾಳ ಮಾಚಿದೇವರ ಕುರಿತು ಉಪನ್ಯಾಸ ಹಾಗೂ ಸಂಮಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
Advertisement
ಅಧ್ಯಕ್ಷತೆಯನ್ನು ಬಸವದಳದ ಅಧ್ಯಕ್ಷತ ಶರಣ ವಿ.ಕೆ. ಕರೇಗೌಡ್ರ ವಹಿಸುವರು. ಶರಣ ಸಾಹಿತ್ಯ ಚಿಂತಕ ಶರಣ ಎಸ್.ಎ. ಮುಗದ ಇವರು ಶಿವಯೋಗ ಪ್ರಾತ್ಯಕ್ಷಿಕೆ ನೀಡುವರು. ನಿವೃತ್ತ ಪ್ರಾಚಾರ್ಯ ಶರಣ ಎನ್.ಎಂ. ಪವಾಡಿಗೌಡ್ರ ಇವರು ಉಪನ್ಯಾಸ ಮಾಡುವರು.
ಬಸವದಳದ ಸದಸ್ಯರು, ಶರಣ ಸಾಹಿತ್ಯಾಭಿಮಾನಿಗಳು ಹಾಗೂ ಆಸಕ್ತರು ಭಾಗವಹಿಸಬೇಕೆಂದು ಸಂಘಟಿಕರ ಪರವಾಗಿ ಪ್ರಕಾಶ ಅಸುಂಡಿಯವರು ವಿನಂತಿಸಿದರು.