ಚಂಡೀಗಢದ ಮುಲ್ಲನ್ಪುರ್ನ ಮಹಾರಾಜ ಯಾದವೀಂದ್ರ ಸಿಂಗ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ.
ಇಂದಿನ ಪಂದ್ಯ ಆರ್ಸಿಬಿಗೆ ಪ್ರತಿಷ್ಠೆ ಆಗಿದ್ದು, ಸೋಲಿಗೆ ಸೇಡು ತೀರಿಸಿಕೊಳ್ಳಬೇಕಿದೆ. ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶುಕ್ರವಾರ ಪಂಜಾಬ್ ಹಾಗೂ ಬೆಂಗಳೂರು ಮುಖಾಮುಖಿಯಾಗಿದ್ದವು. ಆದರೆ ಮಳೆ ಕಾರಣದಿಂದ 14 ಓವರ್ಗಳಿಗೆ ಮಾತ್ರ ಈ ಪಂದ್ಯ ನಿಗಧಿ ಮಾಡಲಾಗಿತ್ತು. ಪಂದ್ಯದಲ್ಲಿ ಟಾಸ್ ಸೋತ ಆರ್ಸಿಬಿ, ಮೊದಲು ಬ್ಯಾಟಿಂಗ್ ಮಾಡಿ ಕೈಸುಟ್ಟುಕೊಂಡಿತ್ತು. ಬ್ಯಾಕ್ ಟು ಬ್ಯಾಕ್ ವಿಕೆಟ್ ಹೋಗಿ ಕೇವಲ 95 ರನ್ಗಳ ಟಾರ್ಗೆಟ್ ನೀಡಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಪಂಜಾಬ್ 98 ರನ್ ಗಳಿಸುವ ಮೂಲಕ ಗೆಲುವು ಪಡೆದಿತ್ತು. ಈ ಸೋಲಿನ ಸೇಡು ತೀರಿಸಿಕೊಳ್ಳಲು ಆರ್ಸಿಬಿ ರೆಡಿಯಾಗಿದೆ.
ಇಂದು ಭಾನುವಾರ ಆಗಿದ್ದರಿಂದ ಡಬಲ್ ಹೆಡ್ಡರ್ ಪಂದ್ಯದಲ್ಲಿ ಆರ್ಸಿಬಿ ಹಾಗೂ ಪಂಜಾಬ್ ನಡುವಿನ ಪಂದ್ಯವೇ ಮೊದಲು ಆರಂಭವಾಗುತ್ತದೆ. ಅಂದರೆ ಮಧ್ಯಾಹ್ನ 3:30ಕ್ಕೆ ಎರಡು ತಂಡಗಳ ಕಾದಾಟ ಶುರುವಾಗಲಿದೆ.
ಪಂಜಾಬ್ ಹಾಗೂ ಆರ್ಸಿಬಿ ನಡುವಿನ ಸೋಲು, ಗೆಲುವುಗಳನ್ನು ನೋಡುವುದಾದ್ರೆ ಈ ವರೆಗೆ ಈ ಎರಡು ತಂಡಗಳು ಒಟ್ಟು 34 ಬಾರಿ ಪೈಪೋಟಿಗೆ ಬಿದ್ದಿವೆ. ಇದರಲ್ಲಿ ಆರ್ಸಿಬಿ 16 ಪಂದ್ಯಗಳಲ್ಲಿ ಗೆಲುವು ಪಡೆದಿದ್ರೆ, ಪಂಜಾಬ್ ತಂಡದ ಕೊನೆಯ ಗೆಲುವು ಸೇರಿ 18 ಬಾರಿ ವಿಜಯ ಪತಾಕೆ ಹಾರಿಸಿದೆ.