ವಿಜಯಸಾಕ್ಷಿ ಸುದ್ದಿ, ಗದಗ: ಶ್ರೀ ಡಾ. ಪಂ. ಪುಟ್ಟರಾಜ ರೈತ ಸಂಘ ರಾಜ್ಯ ಸಂಸ್ಥಾಪಕ ಅಧ್ಯಕ್ಷ ಎಂ.ಪಿ. ಮುಳುಗುಂದ ಅಧ್ಯಕ್ಷತೆಯಲ್ಲಿ, ಕೃಷಿ ಇಲಾಖೆಯ ಅಧಿಕಾರಿಗಳಾದ ಬಸವರಾಜೇಶ್ವರಿ ಸಜ್ಜನ್ನವರ ಉಪಸ್ಥಿತಿಯಲ್ಲಿ ರೈತ ಸಂಪರ್ಕ ಕೇಂದ್ರ ಬೆಟಗೇರಿ ಕಾರ್ಯಾಲಯದಲ್ಲಿ ರೈತ ಬಾಂಧವರಿಗೆ ತೊಗರಿ ಮತ್ತು ಹೆಸರಿನ ಬೀಜಗಳನ್ನು ಬೀಜಗಳನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಯುವ ಘಟಕ ಅಧ್ಯಕ್ಷರು ಸಿರಾಜ ಲಕ್ಕುಂಡಿ, ಎಸ್ಸಿ ಘಟಕದ ಜಿಲ್ಲಾ ಮಹಿಳಾ ಅಧ್ಯಕ್ಷರು ರೇಖಾ ಹುಲ್ಲೂರು, ಗದಗ ಜಿಲ್ಲಾ ಕಾರ್ಯದರ್ಶಿ ಬಸವರಾಜ್ ಮುಧೋಳಮಠ, ಯುವ ಘಟಕದ ತಾಲೂಕಾಧ್ಯಕ್ಷರು ವೆಂಕಟೇಶ್, ಯುವ ಘಟಕ ಗದಗ ಉಪಾಧ್ಯಕ್ಷ ಗವಿಸಿದ್ದಯ್ಯ, ಇಲಾಖೆಯ ಸಿಬ್ಬಂದಿಗಳಾದ ರಮೇಶ್ ಜಂಟಿ, ಸಂಜೀವ ಸೋಮರೆಡ್ಡಿ, ಸುಶಿತಾ ಹೆಬಸೂರ, ಸುನೀಲ್ ತಳವಾರ್, ರೈತರಾದ ಬಸವಂತಪ್ಪ ಕವಲೂರ್, ಮಂಜುನಾಥ್, ಮೆಹಬೂಬ್ಸಾ ಪಾಪಣ್ಣವರ, ಕಲ್ಮೇಶ್ ವಾಲ್ಮೀಕಿ, ಶಶಿಧರ್ ಹೂಗಾರ್, ವೀರಪ್ಪ ತಳವಾರ್ ಮುಂತಾದವರಿದ್ದರು.