ನಾಳೆ ಶ್ರೀ ಬಾಲ ಆಂಜನೇಯ ತೊಟ್ಟಿಲೋತ್ಸವ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಹಿಂದೂ ಮಹಾಸಭಾ ಗಣಪತಿ ಸೇವಾ ಮಂಡಳಿ ವತಿಯಿಂದ ಹನುಮ ಜಯಂತಿ ಪ್ರಯುಕ್ತ ಶ್ರೀ ಬಾಲ ಆಂಜನೇಯ ತೊಟ್ಟಿಲೋತ್ಸವ ಎಪ್ರಿಲ್ 12ರಂದು ನಡೆಯಲಿದೆ.

Advertisement

ಅಂದು ಬೆಳಿಗ್ಗೆ ರುದ್ರಾಭಿಷೇಕ, ಪಾಲಕಿ ಉತ್ಸವ, ತೊಟ್ಟಿಲೋತ್ಸವ, ಸುಮಂಗಲಿಯರಿಗೆ ಉಡಿ ತುಂಬುವುದು, ನಂತರ ಜಗದ್ಗುರು ರೇಣುಕಾಚಾರ್ಯ ರುದ್ರ ಬಳಗದಿಂದ ರುದ್ರಪಠಣ, ಮಹಾಮಂಗಳಾರತಿ ನಡೆಯಲಿದೆ.

ಸಂಜೆ 6ಕ್ಕೆ ಧರ್ಮ ಸಭೆ ನಡೆಯಲಿದ್ದು, ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಬೆಳ್ಳಟ್ಟಿ ರಾಮಲಿಂಗೇಶ್ವರ ದಾಸೋಹಮಠದ ಮ.ನಿ.ಪ್ರ ಬಸವರಾಜ ಮಹಾಸ್ವಾಮಿಗಳು ವಹಿಸುವರು. ಕಾರ್ಯಕ್ರಮವನ್ನು ಶಾಸಕ ಡಾ. ಚಂದ್ರು ಲಮಾಣಿ ಉದ್ಘಾಟಿಸಲಿದ್ದು, ಸಾಂಸ್ಕೃತಿಕ ಸಂಜೆ ಕಾರ್ಯಕ್ರಮವನ್ನು ಮಾಜಿ ಶಾಸಕರುಗಳಾದ ಜಿ.ಎಂ. ಮಹಾಂತಶೆಟ್ಟರ, ಜಿ.ಎಸ್. ಗಡ್ಡದೇವರಮಠ, ರಾಮಣ್ಣ ಲಮಾಣಿ, ಉದ್ಘಾಟಿಸುವರು. ಶ್ರೀ ಪೇಟೆ ಹಾವಳಿ ಆಂಜನೇಯ ಟ್ರಸ್ಟ್ ಅಧ್ಯಕ್ಷ ನೀಲಪ್ಪ ಕರ್ಜಕಣ್ಣವರ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ, ಬಸವೇಶ ಮಹಾಂತಶೆಟ್ಟರ, ವಿಜಯ ಹತ್ತಿಕಾಳ, ಈಶ್ವರ ಮೆಡ್ಲೆರಿ, ಜಗದೀಶ ಪುರಾಣಿಕಮಠ ಪಾಲ್ಗೊಳ್ಳುವರು.

ರಾತ್ರಿ 8ಕ್ಕೆ ವೇದಿಕಾ ನೃತ್ಯ ಶಾಲೆ ಹಾಗೂ ಕಲಾ ವೈಭವ ತಂಡದವರಿಂದ ಕಾರ್ಯಕ್ರಮ, ರಾತ್ರಿ 9ಕ್ಕೆ ಮೈಸೂರಿನ ಜ್ಯೂ. ಪುನೀತ ರಾಜಕುಮಾರ ಹಾಗೂ ಸಂಗಡಿಗರಿಂದ ಸಂಗೀತ ಹಾಗೂ ಹಾಸ್ಯ ರಸಮಂಜರಿ ನಡೆಯಲಿದೆ ಎಂದು ಸಂಘಟಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here