ವಿಜಯಸಾಕ್ಷಿ ಸುದ್ದಿ, ಗದಗ: ಭಾರತರತ್ನ ಪಂ. ಭೀಮಸೇನ್ ಜೋಶಿ ಪ್ರತಿಷ್ಠಾನದ ವತಿಯಿಂದ ಸಂಗೀತ ಸುಧೆ ಕಾರ್ಯಕ್ರಮವನ್ನು 11ರಂದು ಸಾಯಂಕಾಲ 6 ಗಂಟೆಗೆ ಬೆಟಗೇರಿಯ ಹೆಲ್ತ್ ಕ್ಯಾಂಪ್ನಲ್ಲಿರುವ ಚಿದಂಬರ ಆಶ್ರಮದಲ್ಲಿ ನೆರವೇರಲಿದೆ.
ಸಾಯಂಕಾಲ 6ರಿಂದ 7 ಗಂಟೆಯವರೆಗೆ ಧಾರವಾಡದ ಆಕಾಶವಾಣಿ ಕಲಾವಿದೆ ಭಾಗ್ಯಶ್ರೀ ಹೂಗಾರರಿಂದ ಸಿತಾರ ವಾದನ ಜರುಗುವುದು. ರಘುನಂದನ ಹೂಗಾರ ತಬಲಾ ಸಾಥ್ ನೀಡುವರು. ಸಾಯಂಕಾಲ 7ರಿಂದ 9 ಗಂಟೆಯವರೆಗೆ ಭಾರತರತ್ನ ಪಂ. ಭೀಮಸೇನ್ ಜೋಶಿ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಪಂಡಿತ್ ಭೀಮಸೇನ್ ಜೋಶಿಯವರ ನೇರ ಶಿಷ್ಯರಾದ ಪಂಡಿತ್ ಅರವಿಂದ ಹುಯಿಲಗೋಳಕರ್ ಶಾಸ್ತ್ರೀಯ ಸಂಗೀತ, ದಾಸವಾಣಿ ಹಾಗೂ ಭಜನ್ ಕಾರ್ಯಕ್ರಮ ನಡೆಸಿಕೊಡುವರು. ವೆಂಕಟೇಶ ಜೋಶಿ ತಬಲಾ, ಶ್ರೀಕಾಂತ್ ಹೂಲಿ ಸಂವಾದಿನಿ ಹಾಗೂ ವಿಠ್ಠಲ ಕಟ್ಟಿ ತಾಳ ಸಾಥ್ ನೀಡುವರು.
ಕಾರ್ಯಕ್ರಮದ ಆತಿಥ್ಯವನ್ನು ಪ್ರತಿಷ್ಠಾನದ ಕಾರ್ಯಕಾರಿ ಮಂಡಳಿ ಸದಸ್ಯರಾದ ಅರುಣ ರಾಜಪುರೋಹಿತ ಕುಟುಂಬವರ್ಗದವರು ವಹಿಸಿಕೊಂಡಿದ್ದು, ಪ್ರತಿಷ್ಠಾನದ ಪದಾಧಿಕಾರಿಗಳು ಸರ್ವರಿಗೂ ಸ್ವಾಗತ ಕೋರಿದ್ದಾರೆ.