ಯುಪಿ ಮೂಲದ ಕಾರ್ಮಿಕರಿಗೆ ರೈಲು ಡಿಕ್ಕಿ: ಚೆಲ್ಲಾಪಿಲ್ಲಿಯಾಗಿ ಬಿದ್ದ ಮೃತದೇಹಗಳು!

0
Spread the love

ದೊಡ್ಡಬಳ್ಳಾಪುರ: ಯುಪಿ ಮೂಲದ ಕಾರ್ಮಿಕರಿಗೆ ರೈಲು ಡಿಕ್ಕಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ ಹೊರವಲಯದ ಸಿದ್ದೆನಾಯಕನಹಳ್ಳಿ ರೈಲ್ವೆ ಹಳಿ ಬಳಿ ನಡೆದಿದೆ. ಯುಪಿ ಮೂಲದ ರಾಹುಲ್ ( 18 ) ಬಿಕೇಶ್ ( 20 ) ಮತ್ತು ಲಲನ್  ( 24 ) ಮೃತ ದುರ್ಧೈವಿಗಳಾಗಿದ್ದು,

Advertisement

ಮೂವರು ಯುಪಿಯಿಂದ ಬಂದು ಕಾರ್ಪೆಂಟರ್ ಕೆಲಸ ಮಾಡಿಕೊಂಡಿದ್ದರು. ಸಂಜೆ ಕೆಲಸ ಮುಗಿಸಿಕೊಂಡು‌ ಬಂದ ನಂತರ ರೈಲ್ವೆ ಹಳಿ‌ ಬಳಿ ಬಂದಿದ್ದ ಈ ವೇಳೆ ಸೆಲ್ವಿ ಮತ್ತು ರೀಲ್ಸ್ ಮಾಡುತ್ತಿದ್ದಾಗ ರೈಲು ಡಿಕ್ಕಿ ಹೊಡೆದಿರುವ ಶಂಕೆಯಾಗಿದೆ. ರೈಲು ಡಿಕ್ಕಿ ರಬಸಕ್ಕೆ ಹಳಿಗಳ ಮೇಲೆ ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.

ಸತ್ಯ ಸಾಯಿ ಪ್ಯಾಸೆಂಜರ್ ರೈಲು ಡಿಕ್ಕಿ ಹೊಡೆದಿರುವ ಶಂಕೆಯಾಗಿದ್ದು, ಹಳಿ ಮೇಲಿದ್ದ ಮೃತದೇಹಗಳನ್ನ ಕಂಡು ಸ್ಥಳಿಯರಿಂದ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಯಶವಂತಪುರ ರೈಲ್ವೆ ಪೊಲೀಸರಿಂದ ಮೃತದೇಹಗಳು ಶವಾಗಾರಕ್ಕೆ ರವಾನಿಸಿದ್ದು, ಯಶವಂತಪುರ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


Spread the love

LEAVE A REPLY

Please enter your comment!
Please enter your name here