ಸಾರಿಗೆ ನೌಕರರ ಮುಷ್ಕರ: ಸಾರಿಗೆ ಸಂಸ್ಥೆ ಬಸ್ʼಗೆ ಕಲ್ಲು ತೂರಾಟ – ಗಾಜು ಪುಡಿ ಪುಡಿ

0
Spread the love

ಗದಗ: ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದಾರೆ. ರಾಜ್ಯದ ಹಲವೆಡೆ ಕೆಎಸ್ಆರ್ಟಿಸಿ ಸೇರಿ ಸಾರಿಗೆ ನಿಗಮಗಳ ಬಸ್ ಸಂಚಾರ ಭಾಗಶಃ ಸ್ಥಗಿತಗೊಂಡಿದೆ. ಇನ್ನೂ ಸಾರಿಗೆ ಬಸ್ ಮೇಲೆ ಕಲ್ಲು ತೂರಾಟ ನಡೆದಿದೆ.

Advertisement

ಹೌದು ಹುಬ್ಬಳ್ಳಿಯಿಂದ ಗದಗ ಕಡೆ ಬಸ್ ಮಾರ್ಗವಾಗಿ ಹೊಸಪೇಟೆಗೆ ತೆರಳುತ್ತಿದ್ದ ವೇಳೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದು, ಗಾಜು ಪುಡಿ ಪುಡಿಯಾಗಿದೆ. ವಿಜಯನಗರ ಜಿಲ್ಲೆ ಹೊಸಪೇಟೆ ಡಿಪೋಗೆ ಸೇರಿದ ಬಸ್ ಆಗಿದ್ದು, ಹುಬ್ಬಳ್ಳಿ ನಗರದಿಂದ ಹುಬ್ಬಳ್ಳಿ ಹೊರವಲಯದ ಬೈಪಾಸ್ ಗೆ ಬಸ್ ಬರ್ತಿದಂತೆ ಬೈಕ್ ನಲ್ಲಿ ಬಂದ ಇಬ್ಬರು ಮುಸುಕುಧಾರಿಗಳಿಂದ ಈ ಕೃತ್ಯ ನಡೆದಿದೆ.

ಇನ್ನೂ ಈ ಘಟನೆಗೆ ಸಂಬಂಧಿಸಿದಂತೆ ಬಸ್ ಚಾಲಕ ಮಾತನಾಡಿದ್ದು, ಬಸ್ ನಿಧಾನಗತಿ ಇದ್ದಿದ್ರಿಂದಾಗಿ ಬಚಾವಾದ್ವಿ ಇಲ್ಲದಿದ್ರೆ ಅವಘಡ ಸಂಭವಿಸುತ್ತಿತ್ತು. ಆದ್ದರಿಂದ ಮುಂದೆ ಪ್ರಯಾಣ ಬೆಳೆಸಿದ್ರೆ ಏನಾಗತ್ತೋ ಗೊತ್ತಿಲ್ಲ ಹಾಗಾಗಿ ಇಲ್ಲೇ ಬಸ್ ನಿಲ್ಲಿಸಿದ್ದೇವೆ ಎಂದು ಹೇಳಿದ್ದಾರೆ


Spread the love

LEAVE A REPLY

Please enter your comment!
Please enter your name here