ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಇತ್ತೀಚೆಗೆ ಮನೆ ನಿರ್ಮಾಣ ಕಾಮಗಾರಿಯ ಸಂದರ್ಭದಲ್ಲಿ ಸಿಕ್ಕಿದ್ದ ಚಿನ್ನಾಭರಣ ಹಾಗೂ ಬಂಗಾರದ ನಾಣ್ಯಗಳನ್ನು ಸರ್ಕಾರಕ್ಕೆ ಒಪ್ಪಿಸಿದ ಪ್ರಜ್ವಲ್ ರಿತ್ತಿಯನ್ನು ಇಲ್ಲಿಯ ಗದಗ ತಾಲೂಕು ಉಣ್ಣೆ ಉದ್ಯಮಿಕ ಸಹಕಾರಿ ಸಂಘವು ಸನ್ಮಾನಿಸಿ ಗೌರವಿಸಿತು.
ಬಜಾರ್ ರಸ್ತೆಯಲ್ಲಿ ನೂತನವಾಗಿ ಆರಂಭವಾದ ಸಹಕಾರಿ ಸಂಘದಲ್ಲಿ ದತ್ತಾತ್ರೇಯ ಜೋಶಿ ಅವರ ನೇತೃತ್ವದಲ್ಲಿ ನಡೆದ ಸತ್ಯನಾರಾಯಣ ಹಾಗೂ ನವಗ್ರಹ ಪೂಜೆ ಕಾರ್ಯಕ್ರಮದಲ್ಲಿ ಪ್ರಜ್ವಲ್ ರಿತ್ತಿಯನ್ನು ಸನ್ಮಾನಿಸಿದರು.
ಮಾಜಿ ಸಚಿವ ಬಿ.ಆರ್. ಯಾವಗಲ್, ಜಿ.ಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರಡಗಿ, ಸಿದ್ಧಲಿಂಗೇಶ್ವರ ಪಾಟೀಲ, ಗ್ರಾ.ಪಂ ಅಧ್ಯಕ್ಷ ಕೆ.ಎಸ್. ಪೂಜಾರ, ರವಿ ದಂಡಿನ, ವೀರಯ್ಯ ಗಂಧದ, ಮಹೇಶ ಮುಸ್ಕಿನಭಾವಿ, ಬಸವರಾಜ ಮುಳ್ಳಾಳ, ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಉಮಚಗಿ, ಉಪಾಧ್ಯಕ್ಷ ಕೊಟ್ರಪ್ಪ ಬೆನ್ನಳ್ಳಿ, ನಿರ್ದೇಶಕರಾದ ನಾಗರಾಜ ಖಂಡು, ರಾಘವೇಂದ್ರ ವಿಠೋಜಿ, ಕೇಶವ ಗುದಗಿ, ಮಂಜುನಾಥ ಕರಿಯಲ್ಲಪ್ಪನವರ, ಹನುಮಂತ ಗಾಜಿ, ರವಿರಾಜ ಕಟಿಗ್ಗಾರ, ಫಕ್ಕೀರಪ್ಪ ಬಾಳಿಕಟ್ಟಿ, ಶಾರದಾ ತೋಫಿನ, ಮಲ್ಲಿಕಾರ್ಜುನ ಬಿನ್ನಾಳ, ರೇಣುಕಾ ಗರ್ಜಪ್ಪನವರ, ಸುಭಾಸ ಸತ್ಯಣ್ಣವರ, ಶರಣಪ್ಪ ಭಜಂತ್ರಿ ಪಾಲ್ಗೊಂಡಿದ್ದರು.



