ವಿಜಯಸಾಕ್ಷಿ ಸುದ್ದಿ, ಗದಗ: ಭಾರತೀಯ ಜನತಾ ಪಾರ್ಟಿಯ ಗದಗ ಜಿಲ್ಲೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ತೋಟಪ್ಪ(ರಾಜು) ಕುರುಡಗಿ ಹಾಗೂ ಗದಗ ಗ್ರಾಮೀಣ ಮಂಡಲದ ನೂತನ ಅಧ್ಯಕ್ಷರಾದ ಬೂದಪ್ಪ ಹಳ್ಳಿ ಅವರನ್ನು ಗದಗ ವಿಧಾನಸಭಾ ಕ್ಷೇತ್ರದ ಬೆಳದಡಿ ಗ್ರಾಮದ ಪ್ರಮುಖರು ಸನ್ಮಾನಿಸಿದರು.
Advertisement
ಈ ಸಂದರ್ಭದಲ್ಲಿ ಪಕ್ಷದ ಹಿರಿಯರಾದ ಎಂ.ಎಸ್. ಕರಿಗೌಡ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ, ಬ್ರಹ್ಮಾನಂದ ಜಡಿ, ಶರಣಪ್ಪ ಹೊಸಮನಿ, ಮಂಜುನಾಥ ಹಳ್ಳೂರಮಠ, ಗೋವಿಂದಪ್ಪ ಚೌಗಡದ, ವಿರುಪಾಕ್ಷಪ್ಪ ಪೂಜಾರಿ, ರಮೇಶ ಬಡಿಗೇರ, ಅಂದಾನಪ್ಪ ಕಪ್ಪತ್ತನವರ, ಶಿವಾನಂದ ಇನಾಮತಿ, ಡಿ.ಬಿ. ಪರಿಗೌಡ್ರ, ಸುರೇಶ ಮರಳಪ್ಪನವರ, ನವೀನ ಕೊಟೆಕಲ್, ಶಂಕರ ಕಾಕಿ, ರವಿ ಮಾನ್ವಿ, ವಿನೋದ ಹಂಸನೂರ ಮುಂತಾದವರು ಉಪಸ್ಥಿತರಿದ್ದರು.