ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತರಾಗಿ ಅಧಿಕಾರ ವಹಿಸಿಕೊಂಡ ರಾಜಾರಾಮ ಶಿವಾಜಿ ಪವಾರವರಿಗೆ ಕರ್ನಾಟಕ ಮಾದಿಗ ಸಂಘರ್ಷ ಸಮಿತಿ ಗದಗ ಜಿಲ್ಲಾ ಘಟಕದ ಅಧ್ಯಕ್ಷ ರಾಘವೇಂದ್ರ ಪರಸಪ್ಪ ಪರಾಪೂರ ನೇತೃತ್ವದಲ್ಲಿ ಶಿವಶರಣ ಶ್ರೀ ಮಾದಾರ ಚನ್ನಯ್ಯನವರ ಭಾವಚಿತ್ರ ನೀಡಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಳೆದ 3 ವರ್ಷಗಳಿಂದ ಪೂರ್ಣ ಪ್ರಮಾಣದ ಪೌರಾಯುಕ್ತರಿಲ್ಲದೆ ಪೌರಕಾರ್ಮಿಕರಿಗೆ ಮತ್ತು ಜನಸಾಮಾನ್ಯರಿಗೆ ತೊಂದರೆಯಾಗಿತ್ತು. ಶ್ರೀಯುತರು ಪ್ರಾಮಾಣಿಕ ಅಧಿಕಾರಿಯಾಗಿದ್ದು, ತಮ್ಮ ಅಧಿಕಾರಾವಧಿಯಲ್ಲಿ ಪೌರಕಾರ್ಮಿಕರ ಮತ್ತು ನಗರಸಭೆಯ ಅಭಿವೃದ್ಧಿಯಾಗಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಮಾದಿಗ ಸಮಾಜದ ಹಿರಿಯರಾದ ಸತ್ಯಪ್ಪ ಕಡೇಮನಿ, ಪ್ರಮುಖರಾದ ಗಣೇಶ್ ಯಲ್ಲಪ್ಪ ಹುಬ್ಬಳ್ಳಿ, ಈಶ್ವರ್ ದೊಡ್ಡಮನಿ, ಮರಿಯಪ್ಪ ಪರಾಪೂರ, ಶ್ರೀಧರ್ ಜಕ್ಕಲಿ, ದೀಪಕ್ ಕಲ್ಮನಿ, ಪರಶುರಾಮ ಸಂಗಾಪೂರ, ಗಿರೀಶ್ ತಳಗೇರಿ ಹಾಗೂ ಶರಣಬಸಯ್ಯ ಹಿರೇಮಠ, ರಾಷ್ಟ್ರೀನ್ ಜೊಸೆಫ್ ಉಪಸ್ಥಿತರಿದ್ದರು.