ನೂತನ ಪೌರಾಯುಕ್ತರಿಗೆ ಸನ್ಮಾನ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತರಾಗಿ ಅಧಿಕಾರ ವಹಿಸಿಕೊಂಡ ರಾಜಾರಾಮ ಶಿವಾಜಿ ಪವಾರವರಿಗೆ ಕರ್ನಾಟಕ ಮಾದಿಗ ಸಂಘರ್ಷ ಸಮಿತಿ ಗದಗ ಜಿಲ್ಲಾ ಘಟಕದ ಅಧ್ಯಕ್ಷ ರಾಘವೇಂದ್ರ ಪರಸಪ್ಪ ಪರಾಪೂರ ನೇತೃತ್ವದಲ್ಲಿ ಶಿವಶರಣ ಶ್ರೀ ಮಾದಾರ ಚನ್ನಯ್ಯನವರ ಭಾವಚಿತ್ರ ನೀಡಿ ಸನ್ಮಾನಿಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಳೆದ 3 ವರ್ಷಗಳಿಂದ ಪೂರ್ಣ ಪ್ರಮಾಣದ ಪೌರಾಯುಕ್ತರಿಲ್ಲದೆ ಪೌರಕಾರ್ಮಿಕರಿಗೆ ಮತ್ತು ಜನಸಾಮಾನ್ಯರಿಗೆ ತೊಂದರೆಯಾಗಿತ್ತು. ಶ್ರೀಯುತರು ಪ್ರಾಮಾಣಿಕ ಅಧಿಕಾರಿಯಾಗಿದ್ದು, ತಮ್ಮ ಅಧಿಕಾರಾವಧಿಯಲ್ಲಿ ಪೌರಕಾರ್ಮಿಕರ ಮತ್ತು ನಗರಸಭೆಯ ಅಭಿವೃದ್ಧಿಯಾಗಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಮಾದಿಗ ಸಮಾಜದ ಹಿರಿಯರಾದ ಸತ್ಯಪ್ಪ ಕಡೇಮನಿ, ಪ್ರಮುಖರಾದ ಗಣೇಶ್ ಯಲ್ಲಪ್ಪ ಹುಬ್ಬಳ್ಳಿ, ಈಶ್ವರ್ ದೊಡ್ಡಮನಿ, ಮರಿಯಪ್ಪ ಪರಾಪೂರ, ಶ್ರೀಧರ್ ಜಕ್ಕಲಿ, ದೀಪಕ್ ಕಲ್ಮನಿ, ಪರಶುರಾಮ ಸಂಗಾಪೂರ, ಗಿರೀಶ್ ತಳಗೇರಿ ಹಾಗೂ ಶರಣಬಸಯ್ಯ ಹಿರೇಮಠ, ರಾಷ್ಟ್ರೀನ್ ಜೊಸೆಫ್ ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here