ಹಸಿರು ಬಣ್ಣಕ್ಕೆ ತಿರುಗಿದ ತುಂಗಭದ್ರೆ: ನೀರು ಕಲುಷಿತಕ್ಕೆ ಶುಗರ್ ಫ್ಯಾಕ್ಟರಿ ಕಾರಣವಾ!?

0
Spread the love

ಗದಗ:- ಅದು ಮೂರು ಜಿಲ್ಲೆಯ ಜನರ ದಾಹ ನೀಗಿಸುವ ತುಂಗೆ. ಆದರೆ ಈಗ ಈ ತುಂಗೆ ಸಂಪೂರ್ಣ ಮಲೀನವಾಗಿದ್ದಾಳೆ. ಮೂರು ಜಿಲ್ಲೆಯ ನಿದ್ದೆಗೆಡಿಸಿದ್ದಾಳೆ. ವಿಚಿತ್ರ ಅಂದರೆ ಅತೀ ವಿಷಕಾರಿಯಾಗಿದ್ದಾಳೆ ಎಂಬ ಆತಂಕ ಎದುರಾಗಿದೆ. ಇಡೀ ತುಂಗಭದ್ರಾ ನದಿ ಹಸಿರು ವರ್ಣಕ್ಕೆ ತಿರುಗಲು ಆ ಸಕ್ಕರೆ ಕಾರ್ಖಾನೆ ಕಾರಣ ಅಂತ ಜನರು ಕಿಡಿಕಾರಿದ್ದಾರೆ.

Advertisement

ಹೌದು, ತುಂಗಭದ್ರಾ ನೀರು ಹಸಿರು ಬಣ್ಣಕ್ಕೆ ತಿರುಗಿದೆ. ಆದರೆ ನದಿಯ ಬಣ್ಣ ಮೂರು ಜಿಲ್ಲೆಯ ಜನರನ್ನು ಕಂಗಾಲಾಗಿಸಿದೆ. ಈ ವಿಷಯ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ನದಿ ಹಸಿರು ಬಣ್ಣಕ್ಕೆ ತಿರುಗಲು ವಿಜಯನಗರ ಶುಗರ್ ಫ್ಯಾಕ್ಟರಿಯೇ ಕಾರಣವೆಂಬ ಬಲವಾದ ಅನುಮಾನ ಕಾಡಿದೆ

ಹೀಗಾಗಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕಾರ್ಖಾನೆಗೆ ನೋಟಿಸ್ ಕೊಟ್ಟಿದೆ. ಹೀಗಾಗಿ ಕದ್ದುಮುಚ್ಚಿ ತ್ಯಾಜ್ಯ ಬೇಕಾಬಿಟ್ಟಿ ಹರಿಬಿಟ್ಟ ಕಾರ್ಖಾನೆ ಆಡಳಿತ ಮಂಡಳಿಗೆ ಢವಢವ ಶುರುವಾಗಿದೆ. ಅಷ್ಟೇ ಅಲ್ಲ ಕಾರ್ಖಾನೆ ವಿರುದ್ಧ ಸಮರ ಸಾರಲು ಜಿಲ್ಲಾಡಳಿತ ಸನ್ನದ್ಧವಾಗಿದೆ.

ರುಚಿಕಟ್ಟಾಗಿದ್ದ ತುಂಗಭದ್ರೆ ನೀರು ಈಗ ಸಂಪೂರ್ಣ ಕಲುಷಿತವಾಗಿದೆ. ಇಡೀ ನದಿ ಹಸಿರು ಬಣಕ್ಕೆ ತಿರುಗಿದೆ. ಕಳೆದ 20 ದಿನಗಳಿಂದ ಹಸಿರು ಬಣ್ಣಕ್ಕೆ ತಿರುಗಿದ ನದಿ ನೀರು ನೋಡಿ ನದಿ ತೀರದ ಜನ್ರು ಕಂಗಾಲಾಗಿದ್ದಾರೆ.  ಹೊಲ, ಗದ್ದೆಗಳು, ಕುಡಿಯವ ನೀರಿನ ಟ್ಯಾಂಕ್​, ಪೈಪ್​ಗಳಲ್ಲೂ ಹಸಿರು ಬಣ್ಣದ ನೀರು ನೋಡಿ ಜನರು, ಅಧಿಕಾರಿಗಳು ಬೆಚ್ಚಿ ಹೋಗಿದ್ದಾರೆ. ಶುದ್ಧವಾದ ನದಿ ನೀರು ಕಲುಷಿತವಾಗಲು ಸಕ್ಕರೆ ಕಾರ್ಖಾನೆ ತ್ಯಾಜ್ಯವೇ ಕಾರಣ ಅನ್ನೋ ಬಲವಾದ ಅನುಮಾನ ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆ ಅಧಿಕಾರಿಗಳಿಗೆ ಮೂಡಿದೆ. ಹೀಗಾಗಿ ಇದೇ 20 ರಂದು ಮಾಲಿನ್ಯ ನಿಯಂತ್ರಣ ಮಂಡಳಿ ಕಾರ್ಖಾನೆಗೆ ನೋಟಿಸ್ ಕೊಟ್ಟಿದೆ ಅಂತ ಕಾನೂನು ಸಚಿವ ಎಚ್.ಕೆ ಪಾಟೀಲ್ ಹೇಳಿದ್ದಾರೆ.

ಈಗಾಗಲೇ ವಿಜಯನಗರ ಶುಗರ್ ಪ್ರೈವೆಟ್ ಲಿಮಿಟೆಡ್​ನ ಫ್ಯಾಕ್ಟರಿಗೆ ತ್ಯಾಜ್ಯ ನೀರು ಬಿಡುಗಡೆ ಮಾಡದಂತೆ ನಿರ್ಬಂಧ ಹೇರಲಾಗಿದೆ. ಕಾರ್ಖಾನೆ ಅವೈಜ್ಞಾನಿಕವಾಗಿ ತ್ಯಾಜ್ಯ ನೀರು ಬಿಡುತ್ತಿದೆ. ನಾಲಾ, ಹಳ್ಳಕೊಳ್ಳ, ಕೆರೆಯಲ್ಲಿ ತ್ಯಾಜ್ಯ ಬಿಡದಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ. ಸರ್ಕಾರ ಕಾರ್ಖಾನೆ ವಿರುದ್ಧ ಉಗ್ರ ಅಸ್ತ್ರ ಪ್ರಯೋಗ ಮಾಡಿದೆ. ಹೀಗಾಗಿ ಕಂದಾಯ ಇಲಾಖೆಗೆ ಅಧಿಕಾರಿಗಳ ಮೂಲಕ ನೋಟಿಸ್ ನೀಡಲಾಗಿದೆ. ಸಕ್ಕರೆ ಕಾರ್ಖಾನೆಗೆ ಹೋಗಿ ಪ್ರತಿಯೊಂದು ರೀತಿಯಲ್ಲಿ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.


Spread the love

LEAVE A REPLY

Please enter your comment!
Please enter your name here