ಕಾರವಾರ: ಸಂಚಲನ ಮೂಡಿಸಿದ್ದ ವಸಂತ್ ನಾಯ್ಕ ಹತ್ಯೆ ಪ್ರಕರಣದಲ್ಲಿ ಜ್ಯೋತಿಷಿ ಕಮಲಾಕರ್ ಭಟ್ ಗ್ಯಾಂಗ್ ವಿರುದ್ಧದ ತನಿಖೆ ತೀವ್ರಗೊಂಡಿದೆ. ಸಿದ್ದಾಪುರ JMFC ನ್ಯಾಯಾಲಯವು ಕಮಲಾಕರ್ ಭಟ್ ಮತ್ತು ಸುಚಿತ್ರಾ ಸೇರಿ ಐದು ಆರೋಪಿಗಳಿಗೆ ಫೆಬ್ರುವರಿ 21ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿದೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ವಿಚಾರಣೆಯಲ್ಲಿ A1 ಸುಚಿತ್ರಾ, A2 ಲೋಕನಾಥ್, A3 ಕಮಲಾಕರ್ ಭಟ್, A4 ಆಕಾಶ ಹಾಗೂ A8 ವಿನಯ್ ಅವರಿಗೆ ಜ್ಯುಡಿಷಿಯಲ್ ಕಸ್ಟಡಿ ಮುಂದುವರಿಸಲಾಗಿದೆ.
ಇನ್ನೂ ಮೂವರು ಆರೋಪಿಗಳಾದ ಮಹ್ಮದ್ ಮೆಹಫೂಪ್, ಮಹ್ಮದ್ ಫೈಸಲ್ ಮತ್ತು ಇರ್ಫಾನ್ ಪೊಲೀಸ್ ವಶದಲ್ಲಿದ್ದು, ಹತ್ಯೆಗೆ ಬಳಸಿದ ಮಾರಕಾಸ್ತ್ರಗಳ ಪತ್ತೆಗಾಗಿ ಮಹಜರು ಪ್ರಕ್ರಿಯೆ ನಡೆಯುತ್ತಿದೆ. ತನಿಖೆ ಭಾಗವಾಗಿ ಅವರನ್ನು ಶಿವಮೊಗ್ಗಕ್ಕೆ ಕರೆದೊಯ್ಯಲಾಗಿದೆ. ಫೆಬ್ರುವರಿ 13ರಂದು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.
ಪ್ರಕರಣದ ಮುಂದಿನ ಹಂತದ ವಿಚಾರಣೆ ಹಾಗೂ ತನಿಖೆಯ ವಿವರಗಳತ್ತ ಎಲ್ಲರ ಕಣ್ಣು ನೆಟ್ಟಿದೆ.



