ಕೊಲಂಬೋ: ಟಿ20 ವಿಶ್ವಕಪ್ನಲ್ಲಿ ಭಾರತ ವಿರುದ್ಧ ಸೋಲಿನಿಂದ ಕೆಟ್ಟ ಸ್ಥಿತಿಯಲ್ಲಿದ್ದ ಪಾಕಿಸ್ತಾನ ತಂಡ ಬಾಬರ್ ಅಜಂ ಮತ್ತು ಶಾಹಿನ್ ಅಫ್ರಿದಿಯನ್ನು ನಮೀಬಿಯಾ ವಿರುದ್ಧದ ಕೊನೆಯ ಪಂದ್ಯಕ್ಕೆ ವಿಶ್ರಾಂತಿಗೆ ಕಳಿಸಲು ನಿರ್ಧರಿಸಿದೆ.
ಈ ಪಂದ್ಯದಲ್ಲಿ ಗೆದ್ದರೆ ಮಾತ್ರ ಪಾಕ್ ಸೂಪರ್ 8 ಪ್ರವೇಶ ಸಾಧ್ಯವಾಗುತ್ತದೆ. ಭಾರತದೊಂದಿಗೆ ನಡೆದ ಪಂದ್ಯದಲ್ಲಿ 61 ರನ್ಗಳ ಸೋಲಿನ ಬಳಿಕ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿ ತಮ್ಮ ಅಸಮಾಧಾನವನ್ನು ತಂಡದ ವ್ಯವಸ್ಥಾಪಕ ನವೇದ್ ಅಕ್ರಮ್ ಚೀಮಾಗೆ ವ್ಯಕ್ತಪಡಿಸಿದ್ದಾರೆ.
ಇದೀಗ ನಮೀಬಿಯಾ ವಿರುದ್ಧ ಬಾಬರ್ ಮತ್ತು ಶಾಹೀನ್ ಅವರ ಜಾಗದಲ್ಲಿ ಸಲ್ಮಾನ್ ಮಿರ್ಜಾ/ನಸೀಮ್ ಶಾ ಮತ್ತು ಫಖರ್ ಜಮಾನ್ ಅವರನ್ನು ಆಡಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ.
ಎ ಗುಂಪಿನಲ್ಲಿ ಮೂರು ಪಂದ್ಯಗಳನ್ನು ಗೆದ್ದಿರುವ ಭಾರತ ಸೂಪರ್ 8 ಪ್ರವೇಶಿಸಿದೆ. ಇನ್ನೊಂದು ಕಡೆ 2 ಪಂದ್ಯ ಗೆದ್ದಿರುವ ಅಮೆರಿಕ ನೆಟ್ ರನ್ ರೇಟ್ ಆಧಾರದಲ್ಲಿ ಎರಡನೇ ಸ್ಥಾನದಲ್ಲಿದ್ದರೆ ಪಾಕಿಸ್ತಾನ ಮೂರನೇ ಸ್ಥಾನದಲ್ಲಿದೆ.



