ಕಾರು ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೇ ಸಾವು..! ನಾಲ್ವರಿಗೆ ಗಾಯ

0
Spread the love

ರಾಮನಗರ: ಟೀ ಕುಡಿಯಲು ಎಂದು ಹೋಗುವ ವೇಳೆ ಕಾರ್ ಪಲ್ಟಿಯಾಗಿ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ರಾಮನಗರ ಜಿಲ್ಲೆ ಮಾಗಡಿ ಪಟ್ಟಣದ ತಾವರಕೆರೆ ರಸ್ತೆ ಬಳಿ ನಡೆದಿದೆ. ಮಂಜು(31), ಕಿರಣ್ (30) ಮೃತ ದುರ್ಧೈವಿಗಳಾಗಿದ್ದು, ಉಳಿದ ನಾಲ್ವರಿಗೆ ಗಂಭೀರ ಗಾಯಗಳಾಗಿದೆ. ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Advertisement

ಮೂಲತಃ ಮಾಗಡಿ ತಾಲ್ಲೂಕಿನ ಚೋಳನಾಯಕನಹಳ್ಳಿ ಗ್ರಾಮದವರಾದ ಸ್ನೇಹಿತರು ಟೀ ಕುಡಿಯಲು ಎಂದು ಹೋಗುವ ವೇಳೆ ಅವಘಡ ಸಂಭವಿಸಿದೆ. ಇನ್ನೋವ ಕ್ರಿಸ್ಟ್​ ಕಾರಿನಲ್ಲಿ ಹೋಗುವ ವೇಳೆ ಮಾಗಡಿ ತಾಲ್ಲೂಕಿನ ಹೊಸಪಾಳ್ಯದ, ಜನತಾ ಕಾಲೋನಿ ಬಳಿ ಕಾರ್​ ಪಲ್ಟಿಯಾಗಿ ಅಪಘಾತ ಸಂಭವಿಸಿದೆ. ಇನ್ನೂ ಘಟನೆ ಸಂಬಂಧ ಮಾಗಡಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ


Spread the love

LEAVE A REPLY

Please enter your comment!
Please enter your name here