ಬೆಳಗಾವಿ: ಕುಕ್ಕರ್ ಬ್ಲಾಸ್ಟ್ ಆಗಿ ಇಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿಯ ಹೊಟೇಲನ ರೂಮ್ ನಲ್ಲಿ ನಡೆದಿದೆ. ಕುಟುಂಬ ಸಮೇತರಾಗಿ ಸವದತ್ತಿ ಯಲ್ಲಮ್ಮದೇವಿ ದರ್ಶನಕ್ಕೆ ಬಂದಿದ್ದರು. ಅವರಲ್ಲಿ ಬೆಂಗಳೂರಿನಿಂದ 5 ಜನ, ಯಾದಗಿರಿ ಜಿಲ್ಲೆಯಿಂದ 3 ಭಕ್ತರು ಬಂದಿದ್ದರು. ಹೀಗಾಗಿ ಹೋಳಿಗೆ ಮಾಡಲು ಕುಕ್ಕರ್ನಲ್ಲಿ ಬೇಳೆ ಬೇಯಿಸಲು ಗ್ಯಾಸ್ ಹೊತ್ತಿಸಿದ್ದರು.
Advertisement
ಈ ವೇಳೆ ಕುಕ್ಕರ್ ಎರಡು ಸೀಟಿ ಹೊಡೆದ ಬಳಿಕ ಸ್ಫೋಟಗೊಂಡಿದೆ. ಗಂಭೀರ ಗಾಯಗೊಂಡ ಇಬ್ಬರು ಮಹಿಳೆಯರನ್ನ ಹುಬ್ಬಳ್ಳಿ ಕೀಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದು, ಸಣ್ಣಪುಟ್ಟ ಗಾಯವಾದ 6 ಜನರನ್ನ ಸವದತ್ತಿ ಆಸ್ಪತ್ರೆಯಲ್ಲಿದಾಖಲು ಮಾಡುಲಾಗಿದೆ. ಆ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.