ವಿಜಯಸಾಕ್ಷಿ ಸುದ್ದಿ, ಗದಗ: ಜೀತೋ ಲೇಡಿಸ್ ವಿಂಗ್ ವತಿಯಿಂದ ನಗರದ ಸಿಡಿಓ ಮಹಾಜನವಾಡಿ ಗುಜ್ಜರ ಬಸ್ತಿಯಲ್ಲಿ ಉಡಾನ್ ಟ್ರೇಡ್ ಫೇರ್-ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆಯ ಉದ್ಘಾಟನೆಯನ್ನು ಗದಗ ಜಿಲ್ಲಾ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ. ಸಂಕದ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜೀತೋ ಲೇಡಿಸ್ ವಿಂಗ್ನ ಮಹಿಳೆಯರು ಒಂದೆಡೆ ಸೇರಿ ಮಾರಾಟ ಮಳಿಗೆಗಳನ್ನು ಪ್ರದರ್ಶಿಸುತ್ತಿರುವುದು ಹೆಮ್ಮೆಯ ವಿಷಯ. ಇಂತಹ ಕಾರ್ಯಕ್ರಮದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವುದರಿಂದ ಮಹಿಳೆಯರ ಸಬಲೀಕರಣಯಾಗುವುದು ಎಂದರು.
ಇದೇ ಸಂದರ್ಭದಲ್ಲಿ ಪೊಲೀಸ್ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಗದಗ ಜಿಲ್ಲಾ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ. ಸಂಕದ ನಿವೃತ್ತಿ ಹೊಂದುತ್ತಿರುವ ನಿಮಿತ್ತ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಂತೋಷ ಗಡಿಯಾ, ಇಂದಿರಾ ಬಾಗಮಾರ, ಸ್ವೀಟಿ ಬನಸಾಲಿ, ಪ್ರವೀಣ ಚೌಧರಿ, ಅನಿಲಕುಮಾರ ಜೈನ್, ಭರತ ಪಾಟವಾರಿ, ಪಿಂಕಿ ಜೈನ್, ದೀಲಿಪ ಜೈನ್, ಸಂಜೀವ ಬಾಗಮಾರ, ಪ್ರವೀಣ ಭಾಫಣಾ, ಸುರೇಶ ಓಸ್ವಾಲ, ಜೀತೇಂದ್ರ ಜೈನ್ ಸೇರಿದಂತೆ ಜೀತೋ ಲೇಡಿಸ್ ವಿಂಗ್ನ ಮಹಿಳಾ ಪದಾಧಿಕಾರಿಗಳು, ಗಣ್ಯ ವ್ಯಾಪಾರಸ್ಥರು, ಉದ್ದಿಮೆದಾರರು ಉಪಸ್ಥಿತರಿದ್ದರು.