ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಉಮರ ಫಾರೂಕ ಹುಬ್ಬಳ್ಳಿಯವರ ಜನ್ಮದಿನವನ್ನು ಅವರ ಅಭಿಮಾನಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಆಚರಿಸಿದರು.
ಈ ಸಂದರ್ಭದಲ್ಲಿ ಪಾಸ್ಟರ್ ಫ್ರಾನ್ಸಿಸ್ ಕನ್ನಯ್ಯ ಮಾತನಾಡಿ, ಜಿಲ್ಲೆಯ ಅಲ್ಪಸಂಖ್ಯಾತ ಸಮುದಾಯಗಳ ಕಲ್ಯಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಜನಾಬ್ ಉಮರ್ ಫಾರೂಕ್ ಅವರ ಜನ್ಮದಿನದ ಈ ವಿಶೇಷ ಸಂದರ್ಭದಲ್ಲಿ ಕ್ರೈಸ್ತ ಸಮುದಾಯದ ಪರವಾಗಿ ಅವರ ಸೇವೆಯನ್ನು ಸ್ಮರಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಗದಗ-ಬೆಟಗೇರಿ ನಗರಾಭಿವೃದ್ಧಿ ಅಧ್ಯಕ್ಷರಾದ ಅಕ್ಬರಸಾಬ ಬಬರ್ಚಿ, ಅಶೋಕ ಮಂದಾಲಿ, ಮಹ್ಮಮದ ಶಾಲಗಾರ, ನದಾಫ್ ವಕೀಲರು, ಅನ್ವರ ಶಿರಹಟ್ಟಿ, ಶ್ರೀಧರ ಖಟವಟೆ, ರಾಜು, ಜಾವೀದ ಹುಬ್ಬಳ್ಳಿ, ಚಾಂದ ಕೊಟ್ಟೂರ, ಯಾಸೀನ ಹುಬ್ಬಳ್ಳಿ, ದಾದು ಕನವಳ್ಳಿ, ಸಲೀಮ ಬಳ್ಳಾರಿ, ಯೂಸೂಫ ಡಂಬಳ, ಅಹಮ್ಮದ ಖಾಜಿ, ಇರ್ಫಾನ ಡಂಬಳ, ಮುಸ್ತಾಫ ಹುಬ್ಬಳ್ಳಿ, ಕೈಫ ಬಳ್ಳಾರಿ, ಸರ್ಫರಾಜ ಬಬರ್ಚಿ, ಇಲಿಯಾಸ ಹುಬ್ಬಳ್ಳಿ, ಮಾಬುಲಿ ನಾಲಬಂದ, ಅಮೀನ ಧಾರವಾಡ, ಪಾಪು ಬಬರ್ಚಿ, ದಾವಲಸಾಬ ಧಾರವಾಡ, ಶಾಬಾಜ ಮುಲ್ಲಾ, ಲಾಲಸಾಬ ಕಿತ್ತೂರ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.