ಧಾರವಾಡ:- ಕರ್ನಾಟಕದಲ್ಲಿ ಮುಸ್ಲಿಮರು ಹೊರತುಪಡಿಸಿ ಇನ್ನುಳಿದವರಿಗೆ ಅಸುರಕ್ಷಿತ ಎಂದು ವಿಧಾನಸಭಾ ವಿರೋಧ ಪಕ್ಷದ ಉಪ ನಾಯಕ ಅರವಿಂದ್ ಬೆಲ್ಲದ್ ಹೇಳಿದ್ದಾರೆ.
CET ಪರೀಕ್ಷೆಯಲ್ಲಿ ವಿದ್ಯಾರ್ಥಿ ಜನಿವಾರ ತೆಗೆಸಿದ ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಸಿದ್ಧರಾಮಯ್ಯ ನವರ ಸರ್ಕಾರ ಮುಸ್ಲಿಮರಿಗೆ ಬಿಟ್ಟು ಬೇರೆ ಯಾರಿಗೂ ಸರ್ಕಾರನೇ ಇಲ್ಲ ಎಂಬಂತೆ ಮಾಡುತ್ತಿದ್ದು, ಈ ರಾಜ್ಯದಲ್ಲಿ ಮುಸ್ಲಿಮರು ಬಿಟ್ಟು ಬೇರೆ ಯಾರು ಸುರಕ್ಷಿತ ಇಲ್ಲ ಎಂದು ಕಿಡಿಕಾರಿದರು.
ಇವತ್ತು ಜನಿವಾರ ಕೇವಲ ಒಂದೇ ಸಮಾಜಕ್ಕೆ ಅಲ್ಲ, ಹಿಂದೂ ಧರ್ಮದ ಅವಿಭಾಜ್ಯ ಅಂಗ ಆಗಿದ್ದು, ಮಹಾಭಾರತದ ಕಾಲದಿಂದ ನಾವು ನೋಡಿದ್ದೇವೆ. ಬ್ರಾಹ್ಮಣ ಸಮಾಜ, ಜೈನ ಸಮಾಜದಲ್ಲಿ ಜನಿವಾರ ಹಾಕುವಂತ ಪದ್ಧತಿ ಇದೆ. ಲಿಂಗಾಯತರು ಶಿವ ದಾರ ಹಾಕ್ತಾರೆ. ಬೇರೆ ಬೇರೆ ಪದ್ಧತಿ ಸನಾತನ ಧರ್ಮದಲ್ಲಿ ಇವೆ. ಇವತ್ತು ಮುಸ್ಲಿಮರಿಗೆ ಬುರ್ಕಾ ಹಾಕಲು ವಿರೋಧ ಇಲ್ಲಾ, ಹಿಜಾಬ್ ಹಾಕಲು ವಿರೋಧ ಇಲ್ಲಾ. ಆದರೆ ಒಳಗೆ ಇರುವ ಜನಿವಾರ ಹಾಕಿಕೊಂಡರೆ ಇವರಿಗೆ ತೊಂದರೆ ಆಗಿದೆ. ಹೀಗಾಗಿ ಶಿವಮೊಗ್ಗ, ಬೀದರ್ ಹಾಗೂ ಧಾರವಾಡದಲ್ಲಿ ಈ ಘಟನೆ ಆಗಲು ಸಿದ್ಧರಾಮಯ್ಯ ನವರ ಕುಮ್ಮಕ್ಕು ಇದೆ ಎಂದು ಅರವಿಂದ್ ಬೆಲ್ಲದ್ ಹೇಳಿದ್ದಾರೆ.