ಗದಗ: ವೈಕುಂಠ ಏಕಾದಶಿ ನಿಮಿತ್ತ ಗದಗ ನಗರದ ಗಂಗಾಪುರ ಪೇಟೆ ಓಣಿಯಲ್ಲಿ (ಅಂಜಲಿ ಕಬಾಡಿ, ಪಾಯಲ್ ಕಬಾಡಿ) ಶ್ರೀ ವೆಂಕಟೇಶ್ವರ ಲಕ್ಷ್ಮೀದೇವರ ಅವತಾರದಲ್ಲಿ ಪುಟ್ಟ ಮಕ್ಕಳು ಗಮನ ಸೆಳೆದರು. ಈ ಮಕ್ಕಳನ್ನು ನೋಡುತ್ತಿದ್ದರೆ ಭಕ್ತಿ ಭಾವನೆ ಮೂಡಿ ಬರುತ್ತದೆ. ಮಕ್ಕಳಿಗೆ ಇಂತಹ ದೇವರ ವೇಷ-ಭೂಷಣ ಹಾಕಿಸುವುದರಿಂದ ಮಕ್ಕಳಲ್ಲಿ ಸನಾತನ ಹಿಂದೂ ಧರ್ಮದ ಹಾಗೂ ದೇವರ ಬಗ್ಗೆ ಭಕ್ತಿ ಭಾವನೆ ಮೂಡುತ್ತದೆ. ಪ್ರತಿಯೊಬ್ಬರೂ ಮಕ್ಕಳನ್ನು ಈ ರೀತಿ ವೇಷ-ಭೂಷಣ ಹಾಕಿಸಿ ಹಿಂದೂ ಧರ್ಮದ ಸಂಸ್ಕಾರದ ಬಗ್ಗೆ ಅರಿವು ಮೂಡಿಸಿ ಎಂದು ಕ್ರಾಂತಿ ಸೇನಾ ಗದಗ ಜಿಲ್ಲಾ ಅಧ್ಯಕ್ಷ ಬಾಬು ಬಾಕಳೆ ವಿನಂತಿಸಿದ್ದಾರೆ.
Trending Now



