ಬೆಂಗಳೂರು:- ವರಮಹಾಲಕ್ಷ್ಮಿ ಹಬ್ಬಕ್ಕೆ ಕೌಂಟ್ ಡೌನ್ ಶುರುವಾಗಿದ್ದು, ಮಾರ್ಕೆಟ್ನಲ್ಲಿ ಖರೀದಿ ಭರಾಟೆ ಜೋರು ನಡೆದಿದೆ. ಆದರೆ ಇದಕ್ಕೆ ಟ್ರಾಫಿಕ್ ಜಾಮ್ ಬಿಸಿ ತಟ್ಟಿದೆ.
ನಾಳೆ ವರಮಹಾಲಕ್ಷ್ಮಿ ಹಬ್ಬ ಹಿನ್ನೆಲೆಯಲ್ಲಿ ಮಾರ್ಕೆಟ್ಗೆ ಭಾರೀ ಪ್ರಮಾಣದಲ್ಲಿ ವ್ಯಾಪಾರಸ್ಥರು ಲಗ್ಗೆ ಇಟ್ಟಿದ್ದಾರೆ. ಇದರಿಂದ ಮಾರ್ಕೆಟ್ ಸುತ್ತಮುತ್ತ ಎಲ್ಲಿ ನೋಡಿದರೂ ಟ್ರಾಫಿಕ್ ಜಾಮ್..ಜಾಮ್ ಆಗಿದೆ. ಕೇವಲ ಮಾರ್ಕೆಟ್ನಲ್ಲಿ ಮಾತ್ರ ಟ್ರಾಫಿಕ್ ಜಾಮ್ ಆಗಿಲ್ಲ. ಕೆಆರ್ ಸರ್ಕಲ್ನಿಂದ ಕಾರ್ಪೋರೇಷನ್, ಟೌನ್ ಹಾಲ್, ಎಸ್ಪಿ ರೋಡ್, ಮಾರ್ಕೆಟ್ವರೆಗೆ ಟ್ರಾಫಿಕ್ ಜಾಮ್ ಆಗಿದೆ. ಕೆಂಗೇರಿ ಕಡೆಯಿಂದ ಬರುವ ರಸ್ತೆಯೂ ಟ್ರಾಫಿಕ್ನಿಂದ ಕೂಡಿತ್ತು.
ರಾತ್ರಿ ಮಳೆ ಬಂದಿತ್ತು. ಜಡಿ ಮಳೆ ಬೆಳಗಿನ ಜಾವ ಕೂಡ ಹಾಗೆ ಇತ್ತು. ಆದರೂ ಜನರು ದೊಡ್ಡ ಸಂಖ್ಯೆಯಲ್ಲಿ ಮಾರ್ಕೆಟ್ಗೆ ಲಗ್ಗೆ ಇಟ್ಟಿದ್ದಾರೆ. ದೇವರಿಗೆ ಬೇಕಾದ ವಸ್ತುಗಳು, ಹೂವು, ಹಣ್ಣು, ತರಕಾರಿ, ಬಾಳೆ ಎಲೆ, ಬಾಳೆ ದಿಂಬು, ಸಿಹಿ ತಿನಿಸು ಹಾಗೂ ಕೆಲವು ವಸ್ತುಗಳನ್ನು ಖರೀದಿ ಮಾಡಲು ಜನರು ಮುಗಿ ಬಿದ್ದಿದ್ದಾರೆ. ಇದರಿಂದ ಬೆಳ್ಳಂಬೆಳಗ್ಗೆಯೇ ಎಲ್ಲರಿಗೂ ಟ್ರಾಫಿಕ್ ಬಿಸಿ ತಟ್ಟಿದೆ.
ಈ ಎಲ್ಲದರ ನಡುವೆ ಮಾರ್ಕೆಟ್ನಲ್ಲಿ ಯಾವುದೇ ವಸ್ತು ಮುಟ್ಟಲು ಹೋದರೆ ಕೈ ಸುಡುವಂತಾಗಿದೆ. ಅಂದರೆ ಹಬ್ಬದ ಹಿನ್ನೆಲೆಯಲ್ಲಿ ಹೂವು, ಹಣ್ಣು ಸೇರಿ ಪ್ರತಿ ವಸ್ತುವಿನ ಬೆಲೆ ಏರಿಕೆ ಆಗಿದೆ.