HomeEntertainmentಸೆಟ್ಟೇರಿತು ಶ್ರೀನಗರ ಕಿಟ್ಟಿ ನಟನೆಯ ರವಿ ಬೆಳಗೆರೆ ಕಥೆ ಆಧರಿಸಿದ 'ವೇಷಗಳು' ಸಿನಿಮಾ

ಸೆಟ್ಟೇರಿತು ಶ್ರೀನಗರ ಕಿಟ್ಟಿ ನಟನೆಯ ರವಿ ಬೆಳಗೆರೆ ಕಥೆ ಆಧರಿಸಿದ ‘ವೇಷಗಳು’ ಸಿನಿಮಾ

For Dai;y Updates Join Our whatsapp Group

Spread the love

ಅಕ್ಷರ ಮಾಂತ್ರಿಕ ರವಿ ಬೆಳೆಗೆರೆ ಅವರ ‘ವೇಷಗಳು’ ಎಂಬ ಸಣ್ಣ ಕಥೆಯನ್ನು ಆಧರಿಸಿಕೊಂಡು ಅದೇ ಹೆಸರಿನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರದ ಮುಹೂರ್ತ ಮೈಸೂರುರಸ್ತೆಯ ಕೆಂಗೇರಿ ಸಮೀಪ ಜೆ.ಕೆ. ಗ್ರ್ಯಾಂಡ್ ಅರೇನಾ ಆವರಣದಲ್ಲಿ ಹಾಕಲಾದ ಭವ್ಯ ಡ್ರಾಮಾ ಸ್ಟೇಜ್‌ ಸೆಟ್‌ನಲ್ಲಿ ನೆರವೇರಿತು. ಜನಪ್ರಿಯ ನಟ ಮತ್ತು ನಿರ್ಮಾಪಕ ಶ್ರೀನಗರ ಕಿಟ್ಟಿ ಬಸಪ್ಪ ಹಾಗೂ ಬಸಮ್ಮ ಜೋಗತಿ ಎಂಬ ಎರಡು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ವಿಷಯ ಚಿತ್ರಕ್ಕೆ ಹೆಚ್ಚುವರಿ ಕುತೂಹಲ ತಂದಿದೆ.

ಮುಹೂರ್ತದ ಮೊದಲ ಕ್ಲ್ಯಾಪ್‌ಗೆ ಡಿ.ವೈ.ಎಸ್.ಪಿ ರಾಜೇಶ್ ಚಾಲನೆ ನೀಡಿದರು. ನಾಯಕ ನಟ ಕಿಟ್ಟಿ, ನಾಯಕಿ ಅಂಕಿತಾ ಅಮರ್, ನಟ ಭರತ್ ಬೋಪಣ್ಣ, ಹಿರಿಯ ನಟ ಶರತ್ ಲೋಹಿತಾಶ್ವ, ತಬಲಾ ನಾಣಿ, ಸಂಗೀತ ನಿರ್ದೇಶಕ ಕೌಶಿಕ್ ಹರ್ಷ, ಸಾಹಿತ್ಯಗಾರ ಕವಿರಾಜ್, ಛಾಯಾಗ್ರಾಹಕ ಮನೋಹರ ಜೋಷಿ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಹಾಜರಿದ್ದರು.

ಚಿತ್ರದ ನಿರ್ದೇಶಕ ಕಿಶನ್ ರಾವ್ ದಳವಿ ಮಾತನಾಡಿ, “ನಾಟಕ ಹಾಗೂ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ ಅನುಭವದಿಂದಲೇ ‘ವೇಷಗಳು’ ಕಥೆಯನ್ನು ಓದಿದ ಕ್ಷಣದಲ್ಲಿ ಇದನ್ನು ಸಿನಿಮಾ ಮಾಡಲೇಬೇಕು ಅನಿಸಿತು. ಭಾವನಾ ಬೆಳಗೆರೆ ಅವರ ಅನುಮತಿ ಸಿಕ್ಕ ಬಳಿಕ ಕಥೆಯನ್ನು ಚಲನಚಿತ್ರ ರೂಪಕ್ಕೆ ತಂದೆ. ಬಹುತೇಕ ದೃಶ್ಯಗಳು ರಂಗಮಂದಿರದ ಸಜ್ಜಿಕೆಯಲ್ಲಿ ನಡೆಯುತ್ತವೆ. ನಾಟಕದ ಹಿನ್ನೆಲೆಯಲ್ಲಿ ಸಾಗುವ ಪ್ರೇಮಕಥೆ ಇದಾಗಿದೆ,” ಎಂದು ತಿಳಿಸಿದರು.

ಡ್ರಾಮಾ ಸೆಟ್‌ಗಳನ್ನು ಮಾಲೂರು ವಿಜಯ್ ಸಿದ್ಧಪಡಿಸಿದ್ದು, ಡಿಓಪಿ ಮನೋಹರ ಜೋಷಿ ತಂಡಕ್ಕೆ ಹೆಚ್ಚುವರಿ ಶಕ್ತಿ ನೀಡಿದ್ದಾರೆ. ಕವಿರಾಜ್, ನಾಗೇಂದ್ರ ಪ್ರಸಾದ್, ಕಲ್ಯಾಣ್, ವಿ.ಮನೋಹರ್ ಮೊದಲಾದವರು ಸಾಹಿತ್ಯ ಬರೆಯುತ್ತಿದ್ದಾರೆ. “40–50 ಭಾಗಗಳು ನಾಟಕದ ಎಪಿಸೋಡ್‌ಗಳಾಗಿದ್ದು, ಕಥೆ ಬಳ್ಳಾರಿಯಿಂದ ಆರಂಭವಾಗಿ ಉತ್ತರ ಕರ್ನಾಟಕ, ಬೆಂಗಳೂರು, ಮೈಸೂರು, ಮಧ್ಯಪ್ರದೇಶದ ಮಹೇಶ್ವರ ತನಕ ಸಾಗುತ್ತದೆ,” ಎಂದು ನಿರ್ದೇಶಕರು ವಿವರಿಸಿದರು.

ಶ್ರೀನಗರ ಕಿಟ್ಟಿ ಮಾತನಾಡಿ, “ಸಣ್ಣ ಕಥೆಯಿಂದ ಹುಟ್ಟಿಕೊಂಡ ಈ ಸಿನಿಮಾ ರಂಗಭೂಮಿಯ ಒಳಜಗತ್ತನ್ನು, ಅಲೆಮಾರಿ ನಾಟಕ ತಂಡಗಳ ಬದುಕನ್ನು ತೋರಿಸುತ್ತದೆ. ನನ್ನ ಪಾತ್ರದಲ್ಲಿ ಎರಡು ಶೇಡ್ಗಳಿವೆ—ಬಸಪ್ಪ ಹಾಗೂ ಬಸಮ್ಮ. ಇದು ನನ್ನಿಗೆ ಹೊಸ ಅನುಭವ,” ಎಂದರು.

ಹಿರಿಯ ನಟ ಶರತ್ ಲೋಹಿತಾಶ್ವ ತಮ್ಮ ಪಾತ್ರ ‘ಸಿಂಹಣ್ಣ’ ಬಗ್ಗೆ ಮಾತನಾಡುತ್ತ, “ವರ್ಷಗಳಿಂದ ನಿರ್ದೇಶಕ ಕಿಶನ್ ರಾವ್ ಅವರ ಹೋರಾಟ ನೋಡುತ್ತಿದ್ದೇನೆ. ಕಿಟ್ಟಿ ಜೊತೆ ನಾನು ತುಂಬಾ ಕೆಲಸ ಮಾಡಿದ್ದೇನೆ,” ಎಂದರು.

ತಬಲಾ ನಾಣಿ ನಾಟಕ ತಂಡದ ಹಾರ್ಮೋನಿಯಂ ವಾದಕರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, “ಈ ಟೀಮ್ ಜೊತೆ ಕೆಲಸ ಮಾಡುವುದು ಗೌರವ,” ಎಂದರು.

ನಾಯಕಿ ಅಂಕಿತಾ ಅಮರ್ ಮಾತನಾಡಿ, “ನಾವು ಎಲ್ಲರೂ ಜೀವನದಲ್ಲಿ ಒಂದೊಂದು ‘ವೇಷ’ಗಳಲ್ಲಿ ಇರ್ತೇವೆ. ಆ ಕಾಣದ ವೇಷಗಳನ್ನು ತೆರೆ ಮೇಲೆ ತೋರಿಸುವ ಪ್ರಯತ್ನ ಈ ಚಿತ್ರ. ನನ್ನ ಪಾತ್ರ ಅಲಮೇಲು—ಅವಳ ಕನಸು, ಆಸೆ-ಆಕಾಂಕ್ಷೆಗಳು ಕಥೆಯ ಭಾಗ,” ಎಂದರು.

ಭರತ್ ಬೋಪಣ್ಣ “ಚಿನ್ನಲ್ಲ ಎಂಬ ಮುಗ್ಧ ಹುಡುಗ”ನಾಗಿ ಅಭಿನಯಿಸುತ್ತಿದ್ದು, ಸಂಗೀತ ನಿರ್ದೇಶಕ ಕೌಶಿಕ್ ಹರ್ಷ “ಡ್ರಾಮಾ ಹಿನ್ನೆಲೆಯ ಕಥೆಯಾದ್ದರಿಂದ 12 ಹಾಡುಗಳು ಇರುವ ಸಂಗೀತಭರಿತ ಚಿತ್ರ ಇದಾಗಿದೆ” ಎಂದರು.

ಚಿತ್ರದ ಮೊದಲ ದೃಶ್ಯ ಶಾಕುಂತಲಾ–ದುಷ್ಯಂತ ನಾಟಕದ ಸನ್ನಿವೇಶ. ಗ್ರೀನ್ ಟ್ರೀ ಸ್ಟುಡಿಯೋಸ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಕಿಶನ್ ರಾವ್ ದಳವಿ ಕಥೆ–ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಮದನ್ ಹರಿಣಿ ನೃತ್ಯ ನಿರ್ದೇಶನ, ಅಕ್ಷಯ್ ಪಿ. ರಾವ್ ಸಂಕಲನ, ಐಶ್ವರ್ಯ ವಸ್ತ್ರಾಲಂಕಾರ ಮಾಡಿದ್ದಾರೆ.

ಟೀಚರ್ ಆಗಿರುವ ಸೌಜನ್ಯ ಸಂಭಾಷಣೆ ಬರೆದಿದ್ದು, ಜೋಗತಿಯರ ಜೀವನ ಶೈಲಿಯನ್ನು ಹಾಗೂ ರಂಗಭೂಮಿ ಕಲಾವಿದರ ಪರಿವೇಶವನ್ನು ಹೊತ್ತಿರುವ ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಎರಡು ವಿಭಿನ್ನ ಗೆಟಪ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!