ಚೊಚ್ಚಲ ಟ್ರೋಫಿ ಗೆದ್ದ RCBಗೆ ವಿಶ್ ಮಾಡಿದ ವಿಜಯ್ ಮಲ್ಯ: ಸರ್, ಭಾರತಕ್ಕೆ ಹಿಂತಿರುಗಿ ಎಂದು ಬೆಣ್ಣೆ ಹಚ್ಚಿದ SBI

0
Spread the love

ನವದೆಹಲಿ:- ಚೊಚ್ಚಲ IPL ಟ್ರೋಫಿ ಗೆದ್ದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮಾಜಿ ಮಾಲೀಕ ವಿಜಯ್ ಮಲ್ಯ ಅವರು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯ ತಿಳಿಸಿದರು. ಇವರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ SBI, ಸರ್, ಭಾರತಕ್ಕೆ ಹಿಂತಿರುಗಿ ಎಂದು ನಯವಾಗಿ ಬೆಣ್ಣೆ ಹಚ್ಚಿದೆ.

Advertisement

ಒಂದು ಸಮಯದಲ್ಲಿ ಕುಭೇರನಾಗಿ ಮೆರೆಯುತ್ತಿದ್ದ ವಿಜಯ್ ಮಲ್ಯ ವಿಲಾಸಿ ಜೀವನಕ್ಕೆ ಜೋತು ಬಿದ್ದು, ಭಾರತದ ಹಲವಾರು ಬ್ಯಾಂಕುಗಳಿಂದ ಸಾಲ ಪಡೆದು, ಆ ಸಾಲವನ್ನು ಮರು ಪಾವತಿಸದೆ ಎಲ್ಲಾ ಬ್ಯಾಂಕುಗಳಿಗೆ ವಂಚಿಸಿ ವಿದೇಶಕ್ಕೆ ಪಲಾಯನ ಮಾಡಿದ್ದಾರೆ. ಮಲ್ಯ, SBI ಸೇರಿದಂತೆ ಇತರ ಬ್ಯಾಂಕುಗಳಲ್ಲಿ ಸುಮಾರು 9,000 ಕೋಟಿ ರೂ.ಗಳಷ್ಟು ಸಾಲವನ್ನು ಬಾಕಿ ಉಳಿಸಿಕೊಂಡಿದ್ದಾರೆ. ಪ್ರಸ್ತುತ ಲಂಡನ್‌ನಲ್ಲಿ ವಾಸಿಸುತ್ತಿರುವ ಮಲ್ಯ, ತಮ್ಮ X ನಲ್ಲಿ ಆರ್​ಸಿಬಿಗೆ ಶುಭಾಶಯ ತಿಳಿಸಿದ್ದಾರೆ. ಇದಕ್ಕೆ SBI ಕೂಡ ತಕ್ಕ ಪ್ರತ್ಯುತ್ತರ ನೀಡಿದೆ.

ವಿಜಯ್ ಮಲ್ಯ ಮಾಡಿದ್ದ ಟ್ವೀಟ್ ಏನು?

18 ವರ್ಷಗಳ ನಂತರ ಆರ್‌ಸಿಬಿ ಐಪಿಎಲ್ ಚಾಂಪಿಯನ್ ಆಗಿದೆ. 2025 ರ ಟೂರ್ನಮೆಂಟ್‌ನಲ್ಲಿ ಐಪಿಎಲ್ ತಂಡದ ಪ್ರದರ್ಶನ ಬಲಿಷ್ಠವಾಗಿತ್ತು. ಈ ತಂಡವು ಪಂದ್ಯಾವಳಿಯ ಉದ್ದಕ್ಕೂ ಜವಾಬ್ದಾರಿಯುತ ಆಟವನ್ನು ಆಡಿದ್ದು ಕಂಡುಬಂದಿದೆ. ಆಟಗಾರರಲ್ಲಿ ಸರಿಯಾದ ತರಬೇತಿ ಮತ್ತು ಸಮನ್ವಯ ಕಂಡುಬಂದಿದೆ. ಇಡೀ ತಂಡವಾಗಿ ಆಟವನ್ನು ಆಡಿದರು. ಈ ತಂಡಕ್ಕೆ ನನ್ನ ಶುಭಾಶಯಗಳು’ ಎಂದು ವಿಜಯ್ ಮಲ್ಯ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

SBI ಹೇಳಿದ್ದೇನು?

ವಿಜಯ್ ಮಲ್ಯ ಅವರ ಈ ಪೋಸ್ಟ್ ಅನ್ನು ಸುಮಾರು 6 ಲಕ್ಷ ಜನರು ವೀಕ್ಷಿಸಿದ್ದು, ಪ್ರತಿಕ್ರಿಯಿಸಿದ್ದಾರೆ. ಇದರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಒಂದಾಗಿದೆ. ಮಲ್ಯ ಅವರ ಪೋಸ್ಟ್‌ಗೆ ಎಸ್‌ಬಿಐ ಪ್ರತಿಕ್ರಿಯಿಸಿದ್ದು, ‘ಸರ್, ಭಾರತಕ್ಕೆ ಹಿಂತಿರುಗಿ. ಒಟ್ಟಿಗೆ ಆಚರಿಸೋಣ’ ಎಂದು ಟ್ವೀಟ್ ಮಾಡಿದೆ.


Spread the love

LEAVE A REPLY

Please enter your comment!
Please enter your name here