ಬಸವೇಶ್ವರ ಜಾತ್ರೆಯ ತೇರಿನ ಗಾಲಿ ಹಾಯ್ದು ವ್ಯಕ್ತಿ ಸಾವು

0
Spread the love

ರಥೋತ್ಸವದ ಗದ್ದಲದಲ್ಲಿ ನಡೆದ ಅವಘಡ….

Advertisement

ವಿಜಯಸಾಕ್ಷಿ ಸುದ್ದಿ, ಗದಗ

ಜಾತ್ರೆಯ ತೇರಿನ ಗಾಲಿ ಹಾಯ್ದು ವ್ಯಕ್ತಿವೊಬ್ಬ ಮೃತಪಟ್ಟ ದಾರುಣ ಘಟನೆ ನಿನ್ನೆ ಸಂಜೆ ಜರುಗಿದೆ.

ಘಟನೆಯಲ್ಲಿ ಯಲ್ಲಪ್ಪಗೌಡ ಅಲಿಯಾಸ್ ಮುತ್ತಪ್ಪ ತಂದೆ ಪರ್ವತಗೌಡ ಗೌಡ್ರ (42) ಮೃತಪಟ್ಟ ದುರ್ಧೈವಿ.

ಇದನ್ನೂ ಓದಿ ಕರ್ತವ್ಯಲೋಪ, ದುರ್ನಡೆತೆ ಆರೋಪ; ಪಿಎಸ್ಐ ನಿಖಿಲ್ ಕುಮಾರ್ ಸಸ್ಪೆಂಡ್

ಗದಗ ಜಿಲ್ಲೆಯ ರೋಣ ತಾಲೂಕಿನ ಕರ್ಕಿಕಟ್ಟಿ ಗ್ರಾಮದಲ್ಲಿ ನಿನ್ನೆ ಸಂಭ್ರಮದಿಂದ ಬಸವೇಶ್ವರ ಜಾತ್ರೆ ನಡೆದಿತ್ತು. ಜಾತ್ರೆಯ ಅಂಗವಾಗಿ ತೇರು ಎಳೆಯುವ ಗದ್ದಲದಲ್ಲಿ ತೇರಿನ ಗಾಲಿ ಹಾಯ್ದು ಈ ದುರ್ಘಟನೆ ಸಂಭವಿಸಿದೆ.

ಗಂಭೀರವಾಗಿ ಗಾಯಗೊಂಡಿದ್ದ ಯಲ್ಲಪ್ಪಗೌಡನನ್ನು ನರಗುಂದ ತಾಲೂಕಿನ ಶಿರೋಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ನರಗುಂದ ತಾಲೂಕು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯದಲ್ಲಿ ಯಲ್ಲಪ್ಪಗೌಡ ಮೃತಪಟ್ಟಿದ್ದಾನೆ.

ಈ ಕುರಿತು ರೋಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here