ವಿಜಯಸಾಕ್ಷಿ ಸುದ್ದಿ, ಗದಗ
ಸಾರಿಗೆ ಸಂಸ್ಥೆಯ ಬಸ್ನಲ್ಲಿ ಯಾವುದೇ ದಾಖಲೆಗಳಿಲ್ಲದೇ 561 ಸೀರೆಗಳನ್ನು ಸಾಗಿಸುತ್ತಿದ್ದಾಗ ದುಂದೂರು ಚೆಕ್ಪೋಸ್ಟ್ನಲ್ಲಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಎ.5ರಂದು ಆರೋಪಿತನಾದ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ದೆಸನೂರಿನ ಆಲಮ್ಅತ್ತಾವಲ್ಲಾ ನಿಂಬರಗಿ ಮಧ್ಯಾಹ್ನ 1.35ರ ಸಮಯಕ್ಕೆ ಹುಬ್ಬಳ್ಳಿಯಿಂದ ಗದಗಕ್ಕೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ನಲ್ಲಿ 34 ಸಾವಿರ ರೂ. ಬೆಲೆಬಾಳುವ 561 ಸಾಗಾಟ ಮಾಡುತ್ತಿದ್ದ.
ದುಂದೂರು ಚೆಕ್ಪೋಸ್ಟ್ ಬಳಿ ಅಧಿಕಾರಿಗಳು ತಪಾಸಣೆ ಮಾಡಿದಾಗ ಸಿಕ್ಕಿದ್ದು, ಸಂಬಂಧಿಸಿದ ದಾಖಲೆಗಳನ್ನು ಕೇಳಿದಾಗ, ಆರೋಪಿಯು ಸೂಕ್ತ ದಾಖಲೆ, ಉತ್ತರವನ್ನು ಕೊಡದಿರುವುದರಿಂದ ಪಂಚರ ಸಮಕ್ಷಮ ಪಂಚನಾಮೆ ಮಾಡಿಸಿ ಸೀರೆಗಳನ್ನು ವಶಕ್ಕೆ ಪಡೆದಿದ್ದಾರೆ.
ಸದರಿ ಆರೋಪಿಯು ಅನುಮಾನಾಸ್ಪದವಾಗಿ ಎಲ್ಲಿಂದಲೋ ಸೀರೆಗಳನ್ನು ತಂದು, ಕಳ್ಳತನ ಅಥವಾ ಮೋಸದಿಂದ ಸಾಗಾಟ ಮಾಡುತ್ತಿದ್ದ ಎಂದು ಸರ್ಕಾರದ ಪರವಾಗಿ ಕಲಂ 98 ಕೆ.ಪಿ. ಕಾಯ್ದೆಯಂತೆ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.