ಆರ್.ಟಿ. ಓ ಸೂಪರ್‌ವೈಜರ್ ಹೆಸರಿನಲ್ಲಿ ಆಟೋ ಚಾಲಕನ ಹಣ ಸುಲಿಗೆಗೆ ಯತ್ನ

0
Spread the love

ಹತ್ತು ಸಾವಿರ ರೂ. ದಂಡ ವಸೂಲಿಗೆ ಯತ್ನ…..

Advertisement

ವಿಜಯಸಾಕ್ಷಿ ಸುದ್ದಿ, ಗದಗ

ಆಟೋ ಚಾಲಕನೊಬ್ಬನಿಗೆ ನಿನ್ನ ಆಟೋ ಸರಿ ಇಟ್ಟಿಲ್ಲ, ಗ್ಲಾಸ್ ಸರಿಯಾಗಿಲ್ಲ ನಿನ್ನ ಗಾಡಿಯ ದಾಖಲೆಗಳನ್ನು ತೋರಿಸು ಇಲ್ಲದಿದ್ದರೆ ನಿನ್ನ ಗಾಡಿಯನ್ನು ಸೀಜ್ ಮಾಡಿ ತೆಗೆದುಕೊಂಡು ಹೋಗುತ್ತೇನೆ ಎಂದು ಆರ್.ಟಿ.ಓ ಸೂಪರ್‌ವೈಜರ್ ಹೆಸರಿನಲ್ಲಿ ವಂಚನೆಗೆ ಮುಂದಾದ ಘಟನೆ ಜರುಗಿದೆ.

ಗಜೇಂದ್ರಗಡದ ಮುತ್ತುರಾಜ್ ಮೂಕಪ್ಪ ಗುಡೂರ ಎಂಬುವವರು ಇಲ್ಲಿನ ಹೊಸ ಬಸ್ ನಿಲ್ದಾಣದಲ್ಲಿ ಶಮೀರ ಜಂದಿಸಾಬ ಸರಖವಾಸ ಎಂಬ ಆಟೋ ಚಾಲಕನಿಗೆ ಆರೋಪಿ ಮುತ್ತುರಾಜ್ ಮೂಕಪ್ಪ ಗುಡೂರ ಎಂಬಾತ ಆಟೋ ಸರಿಯಾಗಿ ಇಟ್ಟುಕೊಂಡಿಲ್ಲ, ದಾಖಲೆ ತೋರಿಸು ಇಲ್ಲದಿದ್ದರೆ ನಿನ್ನ ಆಟೋ ಸೀಜ್ ಮಾಡಿ ತೆಗೆದುಕೊಂಡು ಹೋಗುತ್ತೇನೆ ಅಂತ ಹೇಳಿದ್ದಲ್ಲದೇ ಹತ್ತು ಸಾವಿರ ರೂ. ದಂಡ ಕಟ್ಟು ಅಂತ ಹೇಳಿ, ಆರ್. ಟಿ.ಓ ಸೂಪರ್‌ವೈಜರ್ ಹೆಸರಿನಲ್ಲಿ ಹೆದರಿಸಿ, ವಂಚನೆ ಮಾಡಲು ಯತ್ನಿಸಲಾಗಿದೆ.

ಈ ಕುರಿತು ಬೆಟಗೇರಿ ಬಡಾವಣೆ ಠಾಣೆಯಲ್ಲಿ ಆರೋಪಿ ಮುತ್ತುರಾಜ್ ಮೂಕಪ್ಪ ಗುಡೂರ ಎಂಬಾತನ ಮೇಲೆ ಐಪಿಸಿ-1960(u/s- 511, 384, 419, 420) ೦೦೦೪/೨೦೨೩ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here