ವಿಜಯಸಾಕ್ಷಿ ಸುದ್ದಿ, ಬಳ್ಳಾರಿ
Advertisement
ಪ್ಯಾಸೆಂಜರ್ ಆಟೋವೊಂದು ತುಂಗಭದ್ರಾ ಕಾಲುವೆಗೆ ಬಿದ್ದು ಮೂವರು ಮೃತಪಟ್ಟು, ಮೂರು ಜನ ನೀರುಪಾಲಾದ ಘಟನೆ ಇಂದು ಮುಂಜಾನೆ ತಾಲೂಕಿನ ಕೊಳಗಲ್ಲು ಗ್ರಾಮದ ಬಳಿ ಜರುಗಿದೆ.
ಒಟ್ಟು ಹತ್ತು ಜನ ಅಟೋದಲ್ಲಿ ಪ್ರಯಾಣಿಸುತ್ತಿದ್ದರು. ನಾಲ್ವರು ಪಾರಾಗಿದ್ದು, ಮೂವರು ಮೃತಪಟ್ಟಿದ್ದಾರೆ. ಇನ್ನೂ ಮೂರು ಜನರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತದೆ ಎಂದು ಎಸ್ಪಿ ಸೈದುಲ್ ಅದಾವತ್ ಮಾಹಿತಿ ನೀಡಿದ್ದಾರೆ.