ಬಿಜೆಪಿ- ಕಾಂಗ್ರೆಸ್‌ ಕಾರ್ಯಕರ್ತರ ಗಲಾಟೆ ಪ್ರಕರಣ; ಕಾಂಗ್ರೆಸ್‌ನ 9 ಜನ, ಬಿಜೆಪಿಯ ನಗರಸಭೆ ಸದಸ್ಯರು ಸೇರಿ 12 ಜನರ ಮೇಲೆ ಕೇಸ್

0
Spread the love

ದೂರು.. ಪ್ರತಿದೂರು ದಾಖಲು……

Advertisement

ವಿಜಯಸಾಕ್ಷಿ ಸುದ್ದಿ, ಗದಗ

ನಿನ್ನೆ ಬಿಜೆಪಿ ಕಾಂಗ್ರೆಸ್ ಕಾರ್ಯಕರ್ತರ ನಡುವೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸ್ ಆಂಡ್ ಕೌಂಟರ್ ಕೇಸ್ ದಾಖಲಾಗಿದೆ.

ಶಹರ ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್ ಪಕ್ಷದ ಒಂಬತ್ತು ಜನರ ಮೇಲೆ ಹಾಗೂ ಬಿಜೆಪಿಯ 12 ಜನರ ಮೇಲೆ ಪ್ರಕರಣ ದಾಖಲಾಗಿದೆ.

ಕಾಂಗ್ರೆಸ್ ಪಕ್ಷದ ವಿದ್ಯಾಧರ ದೊಡ್ಡಮನಿ, ಬಸವರಾಜ್ ಬೆಳದಡಿ, ಅನೀಲ ಸಿದ್ದಮ್ಮನಹಳ್ಳಿ, ಶಿವಪ್ಪ ಬಳ್ಳಾರಿ, ಪಾಟೀಲ್‌ ಸಿ.ಕೆ, ಬಾಬಾಜಾನ್ ಬೇಲೇರಿ, ಚಂದ್ರು ಕರಿರಾಯನಗೌಡ್ರ, ಆಂಜನೇಯ ಕಟಗಿ, ಪ್ರಭು ಬುರುಬುರೆ ಇವರೆಲ್ಲರೂ ಸೇರಿ ಕಾನೂನು ಬಾಹಿರವಾಗಿ ಗುಂಪು ಕಟ್ಟಿಕೊಂಡು ಅನಿಲ ಮೆಣಸಿನಕಾಯಿ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಬಗ್ಗೆ ದೂರು ದಾಖಲಾಗಿದೆ.

ಬಿಜೆಪಿ ಅಭ್ಯರ್ಥಿ ಅನಿಲ ಮೆಣಸಿನಕಾಯಿ ಅವರು ತಮ್ಮ ನಾಮಪತ್ರ ಸಲ್ಲಿಸಿ ಕಾರು ಹತ್ತುವು ಸಂದರ್ಭದಲ್ಲಿ ಈ ಒಂಬತ್ತು ಜನ ಕಾಂಗ್ರೆಸ್ ಕಾರ್ಯಕರ್ತರು, ಅನಿಲ ಮೆಣಸಿನಕಾಯಿ ಅವರ ಕಾರಿನ ಗ್ಲಾಸ್ ಒಡೆದು, ಮಜ್ಜಿಗೆ ಪಾಕೆಟ್ ತೂರಾಡಿ, ಬಾಯಿಂದ ಉಗುಳಿ ಚಪ್ಪಲಿ ಒಗೆದು ಅವಮಾನ ಪಡಿಸಿ, ಬಾಬಾಜಾನ ಬೇಲೇರಿ ಎಂಬುವರು, ಶರಣಪ್ಪ ಬಸಪ್ಪ ಕಮಡೊಳ್ಳಿ ಹಾಗೂ ಉಮೇಶ್ ಮಲ್ಲಪ್ಪ ಹಡಪದ ಇವರ ತಲೆಗೆ ಕಲ್ಲಿನಿಂದ ಹೊಡೆದು ಗಾಯಪಡಿಸಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ಪರಮೇಶ್ ಚನ್ನಪ್ಪ ನಾಯಕ ಇವರು ಶಹರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

0041/2023 ಕಲಂ IPC 1860 (U/s-143,147, 148, 323, 324, 427, 355, 504, 506, 149) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಪಕ್ಷದ ಶಿವಪ್ಪ ಬಳ್ಳಾರಿ ಎಂಬುವರು ಇಬ್ಬರು ನಗರಸಭೆ ಸದಸ್ಯರು ಸೇರಿದಂತೆ 12 ಜನರ ಮೇಲೆ ದೂರು ಕೊಟ್ಟಿದ್ದಾರೆ.

ಶಿವಪ್ಪ ಮುಳಗುಂದ, ವೆಂಕಟೇಶ ಮೆಹರವಾಡೆ, ಸೋಹೆಲ್ ಕೊಟ್ಟೂರು, ಉಡಚಪ್ಪ ಹಳ್ಳಿಕೇರಿ, ಕುಮಾರ್ ಮಾರನಬಸರಿ, ವಸಂತ ಪಡಗದ, ಶಿವು ಹಿರೇಮನಿಪಾಟೀಲ, ಅನಿಲ ಅಬ್ಬಿಗೇರಿ, ಪರಮೇಶ್ ನಾಯಕ, ಶರಣು ಚಿಂಚಲಿ ಮುತ್ತು ಮುಶಿಗೇರಿ, ಅಮರೇಶ್ ಬೆಟಗೇರಿ ಹಾಗೂ ಹಲವು ಜನರ ಮೇಲೆ ದೂರು ದಾಖಲಾಗಿದೆ.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಚ್ ಕೆ ಪಾಟೀಲ್ ಇವರು, ನಾಮಪತ್ರ ಸಲ್ಲಿಸಲು ಉಪವಿಭಾಗಾಧಿಕಾರಿಗಳ ಕಛೇರಿಯಲ್ಲಿ ಇರುವಾಗ, ಆ ಸಂದರ್ಭದಲ್ಲಿ ಬಿಜೆಪಿ ನಿಯೋಜಿತ ಅಭ್ಯರ್ಥಿ ಅನಿಲ ಮೆಣಸಿನಕಾಯಿ ಹಾಗೂ ಅವರ ಹಿಂಬಾಲಕರು, ಉಪವಿಭಾಗಾಧಿಕಾರಿಗಳ ಕಾರ್ಯಾಲಯದಿಂದ ಹೊರಗಡೆ ಬಂದಿದ್ದು, ಆ ಕಾಲಕ್ಕೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ನೋಡಿ,

ಸಿಟ್ಟಿನಿಂದ ನೋಡುತ್ತಾ ಕಾರು ಹತ್ತಲು ಪ್ರಯತ್ನಿಸುತ್ತಿದ್ದಾಗ ಅವರ ಕಾರ್ಯಕರ್ತರಾದ ಶಿವಪ್ಪ ಮುಳಗುಂದ, ನಮ್ಮೇನ್ನೆಲ್ಲಾ ನೋಡಿ, ಮೀಸೆ ತಿರುವಿ, ಶೆಡ್ ಹೊಡೆದು ಈ ಸಲ ಮಕ್ಕಳ ನಿಮ್ಮೆಲ್ಲರನ್ನೂ ಒಂದು ಕೈ ನೋಡುತ್ತೇವೆ ಅನ್ನುತ್ತಾ, ಶಿವಪ್ಪ ಬಳ್ಳಾರಿಗೆ ಅವಾಚ್ಯ ಶಬ್ದಗಳನ್ನು ಬಳಸಿ, ನೋಡಿಕೊಂಡು ಬಿಡೋಣ ಅಂದಾಕ್ಷಣ ವೆಂಕಟೇಶ ಮೆಹರವಾಡೆ ಇವರು, ಏಕಾಏಕಿ ಅಸುಂಡಿ ಗ್ರಾಮದ ವೆಂಕರಡ್ಡಿ ಹನಮರಡ್ಡಿ ರಾಮೇನಹಳ್ಳಿ ಇವರಿಗೆ ಮುಷ್ಠಿಯಿಂದ ಹೊಡೆಯಲು ಹತ್ತಿದಾಗ,

ಬಿಡಿಸಲು ಹೋದ ಶಶಿಧರಗೌಡ ಲೆಂಕನಗೌಡರ ಇವರಿಗೂ ಅವಾಚ್ಯ ಶಬ್ದಗಳಿಂದ ನಿಂಧಿಸಿ ತಳ್ಳಿದಾಗ, ಮತ್ತೊಬ್ಬ ಸೋಹೆಲ್ ಕೊಟ್ಟೂರು ಕೂಡ ಶಿವಪ್ಪ ಬಳ್ಳಾರಿ ಅವರಿಗೆ ಆವಾಚ್ಯ ಶಬ್ದಗಳಿಂದ ಬೈದು, ಕಪಾಳಕ್ಕೆ ಹೊಡೆದು ಕಾಲಿನಿಂದ ಒದ್ದಾಗ,

ವೆಂಕಟೇಶ ಮೆಹರವಾಡೆ ಇವಂದು ಬಾಳ ಆಗೈತಿ ಸಾಯಿಸಿ ಬಿಡಬೇಕು ಎಂದು ಆವಾಚ್ಯ ಶಬ್ದಗಳಿಂದ ನಿಂಧಿಸಿ, ಜೀವ ಬೆದರಿಕೆ ಹಾಕಿದ್ದಾರೆ. ಉಡಚಪ್ಪ ಹಳ್ಳಿಕೇರಿ ಎಂಬುವರು ಎಲೆಕ್ಷನ್ ಅದು ಹೇಗೆ ಮಾಡ್ತೀರೀ ನೋಡ್ತೀವಿ ಎಂದು ಹೊಡೆದನು. ಕುಮಾರ್ ಮಾರನಬಸರಿ, ಕಲ್ಲಿನಿಂದ ಕಾಲಿಗೆ ಒಗೆದನು ಎಂದು ದೂರಿನಲ್ಲಿ ವಿವರಿಸಲಾಗಿದೆ. ಅಷ್ಟೇ ಅಲ್ಲದೆ ವಸಂತ ಪಡಗದ, ಶಿವು ಹಿರೇಮನಿಪಾಟೀಲ, ಅನೀಲ ಅಬ್ಬಿಗೇರಿ, ಪರಮೇಶ್ ನಾಯಕ, ಶರಣು ಚಿಂಚಲಿ, ಮುತ್ತು ಮುಶಿಗೇರಿ, ಅಮರೇಶ್ ಬೆಟಗೇರಿ ಸೇರಿದಂತೆ ಇನ್ನೂ ಅನೇಕರು ಶಿವಪ್ಪ ಬಳ್ಳಾರಿ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಜೀವದ ಬೆದರಿಕೆ ಹಾಕಿ ಹೋಗಿದ್ದಾರೆ ಎಂದು ಶಹರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಮಾಹಿತಿ ‌ನೀಡಿದ್ದಾರೆ.

0042/2023 ಕಲಂ IPC 1860 (U/s-143, 147, 148, 323, 324, 504, 506, 149) ಅಡಿಯಲ್ಲಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here