ವಿಜಯಸಾಕ್ಷಿ ಸುದ್ದಿ, ಗದಗ
Advertisement
ವಾರ್ಡ ನಂ.17 ಮತ್ತು 18ರ ಬಿಜೆಪಿ ಯುವ ಧುರೀಣ ಸುನೀಲ ಬಾರಕೇರ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರಿದರು.
ಪಕ್ಷದ ಕಾರ್ಯಾಲಯದಲ್ಲಿ ಶಾಸಕ ಎಚ್ ಕೆ ಪಾಟೀಲರು ಸುನೀಲ ಅವರಿಗೆ ಮಾಲೆ ಹಾಕಿ ಪಕ್ಷಕ್ಕೆ ಸ್ವಾಗತಿಸಿದರು. ಗದಗ ಬೆಟಗೇರಿ ಶಹರ ಕಾಂಗ್ರೆಸ್ ಅಧ್ಯಕ್ಷ ಬಿ ಬಿ ಅಸೂಟಿ, ನಗರಸಭೆ ಸದಸ್ಯರಾದ ಜೂನಸಾಬ ಆರ್ ನಮಾಜಿ, ಮುನ್ನಾ ರೇಶ್ಮಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.