ಮರಕ್ಕೆ ಬೈಕ್ ಡಿಕ್ಕಿ; ಸ್ಥಳದಲ್ಲೇ ಇಬ್ಬರು ಬಾಲಕರು ಸಾವು,‌ ಮತ್ತೊಬ್ಬ ಬಾಲಕ ಗಂಭೀರ

0
Spread the love

ಈಜುಕೊಳಕ್ಕೆ ಹೋಗಿ ವಾಪಸು ಬರುವಾಗ ನಡೆದ ಘಟನೆ…….

Advertisement

ವಿಜಯಸಾಕ್ಷಿ ಸುದ್ದಿ, ಗದಗ

ನಿಯಂತ್ರಣ ತಪ್ಪಿದ ಬೈಕ ಮರಕ್ಕೆ ಡಿಕ್ಕಿ ಹೊಡೆದು ಇಬ್ಬರು ಬಾಲಕರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶುಕ್ರವಾರ ಮಧ್ಯಾಹ್ನ ಜರುಗಿದೆ.

ಗದಗ ಜಿಲ್ಲೆಯ ರೋಣ ಪಟ್ಟಣದ ಬಸ್ ಡಿಪೋ‌ ಬಳಿ ಈ ದುರ್ಘಟನೆ ಜರುಗಿದೆ.

ಅನೂಪ ಇಟಗಿ (15) ಶ್ರೀಶಾಂತ ಗಡಗಿ (15 ) ಮೃತಪಟ್ಟ ದುರ್ಧೈವಿಗಳು ಎಂದು ಗುರುತಿಸಲಾಗಿದೆ.

ಅಬ್ಬಿಗೇರಿ ಗ್ರಾಮದ ಬಳಿ ಇರುವ ಕಲಾಕಾಶಿ ಈಜು ಕೊಳಕ್ಕೆ ಹೋಗಿ ವಾಪಸು ಬರುವಾಗ ಬೈಕ್ ನಿಯಂತ್ರಣ ಕಳೆದುಕೊಂಡು ಈ ಘಟನೆ ಜರುಗಿದೆ. ಮತ್ತೊಬ್ಬ ಬಾಲಕ ಮೌನೇಶ್ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತ ಇಬ್ಬರೂ ಬಾಲಕರು ರೋಣ ಪಟ್ಟಣದ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಸುದ್ದಿ ತಿಳಿದು ಸ್ಥಳಕ್ಕೆ ರೋಣ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರೋಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.


Spread the love

LEAVE A REPLY

Please enter your comment!
Please enter your name here