ಬೈಕ್ ಅಪಘಾತ; ಪುರಸಭೆ ನೌಕರ ಬಸವರಾಜ್ ಸಾವು

0
Spread the love

ಕರ ವಸೂಲಿ ಸಹಾಯಕರಾಗಿದ್ದ ಬಸವರಾಜ್

Advertisement

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ಪಟ್ಟಣದ ಪುರಸಭೆಯಲ್ಲಿ ಕರ ವಸೂಲಿ ಸಹಾಯಕರಾಗಿದ್ದ ಬಸವರಾಜ ಕೆ. ಬೆಳವಿಗಿ ಶನಿವಾರ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಹುಬ್ಬಳ್ಳಿಯಲ್ಲಿ ಕಂಪ್ಯೂಟರ್ ಸಾಕ್ಷರತೆ ಪರೀಕ್ಷೆ ಮುಗಿಸಿ ಶನಿವಾರ ರಾತ್ರಿ ಲಕ್ಷ್ಮೇಶ್ವರ ಪಟ್ಟಣಕ್ಕೆ ಮರಳಿ ಬರುವಾಗ ಕುಂದಗೋಳ ತಾಲೂಕಿನ ಪಶುಪತಿಹಾಳ ಗ್ರಾಮದ ಹತ್ತಿರ ಬೈಕ್ ಅಪಘಾತಕ್ಕೀಡಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರಿಗೆ ಪತ್ನಿ, ಮೂವರು ಪುತ್ರರು ಬಂಧು-ಬಳಗವಿದೆ.


Spread the love

LEAVE A REPLY

Please enter your comment!
Please enter your name here